ಸೊಪ್ಪು ಮಾರುತ್ತಿದ್ದ ಕೀರ್ತನಾಗೆ ಲ್ಯಾಪ್ ಟಾಪ್ ಸಿಕ್ತು!

ಮೈಸೂರು: ಅಪ್ಪನ ಸಂಕಷ್ಟಕ್ಕೆ ಹೆಗಲು ಕೊಟ್ಟು ಸೊಪ್ಪು ವ್ಯಾಪಾರ ಮಾಡುತ್ತಾ ಟ್ಯಾಬ್ ಕೊಂಡುಕೊಳ್ಳಲು ಕಷ್ಟಪಡುತ್ತಿದ್ದ ಮೈಸೂರಿನ ಸಾತಗಳ್ಳಿಯ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿನಿ ಕೀರ್ತನಾಗೆ ಸುಜೀವ್ ಸಂಸ್ಥೆ ಲ್ಯಾಪ್ ಟಾಪ್ ನೀಡಿ ಸಹಾಯ ಮಾಡಿದೆ.

ತಮ್ಮ ಸಂಸ್ಥೆಯಿಂದ ಆಕೆಯ ಓದಿಗೆ ಅನುಕೂಲವಾಗುವಂತೆ ಲ್ಯಾಪ್‌ ಟಾಪ್ ನೀಡಿದೆ. ಮಾಧ್ಯಮದಲ್ಲಿ ವರದಿ ಗಮನಿಸಿದ  ಸಂಸ್ಥೆಯ ಮುಖ್ಯಸ್ಥ  ರಾಜಾರಾಂ ಅವರು ವಿದ್ಯಾರ್ಥಿನಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್ ವಿತರಿಸಿದ್ದಾರೆ ಅಷ್ಟೇ ಅಲ್ಲದೆ ಆಕೆಯ ವಿದ್ಯಾಭ್ಯಾಸಕ್ಕು ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದಾರೆ.

ಜತೆಗೆ ಎನ್.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ತನ್ವೀರ್ ಸೇಠ್ ಅವರಿಗೆ ಆ ವಿದ್ಯಾರ್ಥಿನಿಯನ್ನು ಭೇಟಿ ಮಾಡಿಸಿ ಸರ್ಕಾರದಿಂದ ಕೊಡಬಹುದಾದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *