ಮೂಕ ಪ್ರಾಣಿಗಳ ಹಸಿವು ತಣಿಸಿದವರಿಗೆ ಅಭಿನಂದನೆ!

ಮೈಸೂರು: ಕೋವಿಡ್  ಲಾಕ್ ಡೌನ್ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಪ್ರತಿನಿತ್ಯ ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುವ ಅಭಿಯಾನ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಭಾಗವಹಿಸಿದ್ದ 50 ಸ್ವಯಂ ಸೇವಕರಿಗೆ ಮೈಲಾಕ್ ಅಧ್ಯಕ್ಷರಾದ ಎನ್.ವಿ ಪಣೀಶ್ ಮತ್ತು ಕರ್ನಾಟಕ ಪ್ರಾಣಿಪಕ್ಷಿ ಕಲ್ಯಾಣ ಮಂಡಳಿ ಅಧ್ಯಕ್ಷ ಕೃಷ್ಣ ಮಿತ್ತಲ್ ರವರು ಕರ್ನಾಟಕ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ  ಅಭಿನಂದನಾಪತ್ರ ಮತ್ತು ಸಸಿ ನೀಡಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ರವರು ಮೈಸೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣಿಪ್ರಿಯರು ಹೆಚ್ಚಿದ್ದಾರೆ ಎನ್ನುವುದಕ್ಕೆ ಕೆಎಂಪಿಕೆ ಟ್ರಸ್ಟ್ ಎರಡು ತಿಂಗಳ ಕಾಲ ವಿವಿಧೆಡೆ ಹಮ್ಮಿಕೊಂಡಿದ್ದ ಪ್ರಾಣಿಪಕ್ಷಿ ಸೇವಾ ಜಾಗೃತಿ ಅಭಿಯಾನದಲ್ಲಿ ನೂರಾರು ಸ್ವಯಂಸೇವಕರು ಭಾಗವಹಿಸಿರುವುದು ಸಾಕ್ಷಿಯಾಗಿದೆ. ನೂರಾರು ಸಂಘ ಸಂಸ್ಥೆಗಳು ಆಹಾರ ಕಿಟ್, ಅನ್ನಸಂತರ್ಪಣೆ ಮಾಸ್ಕ್ ಸ್ಯಾನಿಟೈಜರ್ ನಾಗರೀಕರಿಗೆ ನೀಡಿದರು.  ಅದೇ ರೀತಿ ಸಮಾಜದಲ್ಲಿ ಪ್ರಾಣಿಪಕ್ಷಿ ಸೇವಾ ಮನೋಭಾವದೊಂದಿಗೆ ಎಲ್ಲ ಜೀವಿಗಳು ಮುಖ್ಯವೆಂದು ಮೂಕ ಪ್ರಾಣಿಪಕ್ಷಿಗಳಿಗೆ ಆಹಾರ ನೀಡಿ ಹಸಿವು ನೀಗಿಸಿದ ಕೆಎಂಪಿಕೆ ಟ್ರಸ್ಟ್ ಸ್ವಯಂಸೇವಕರ ಕಾರ್ಯ ಅರ್ಥಪೂರ್ಣವಾಗಿದೆ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ರವರು ಮಾತನಾಡಿ ಕೋವಿಡ್ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ನಾಗರೀಕರು  ಮನೆಯಲ್ಲೇ ಇರುವುದು ಸಾಮಾಜಿಕ ಅಂತರ ಕಡ್ಡಾಯವಾಗಿ ಮಾಸ್ಕ್ ಧರಿಸಿ ನಿಯಮಗಳನ್ನ ಪಾಲಿಸಿದರು. ಆದರೆ ನಗರ ಬಡಾವಣೆಗಳಲ್ಲಿ ನಾಗರೀಕತೆಯೊಂದಿಗೆ ಅವಲಂಬಿತವಾಗಿ ಬದುಕುವ ಮೂಕಪ್ರಾಣಿ ಪಕ್ಷಿಗಳ ಜೀವ ಉಳಿಸಲು ಹಸಿವು ನೀಗಿಸಲು ಪ್ರತಿನಿತ್ಯ ಆಹಾರ ಪೊರೈಕೆ ಮಾಡಿರುವ  ಕೆಎಂಪಿಕೆ ಟ್ರಸ್ಟ್‌ನ ಪ್ರಾಣಿಪಕ್ಷಿ ಸೇವಾ ಅಭಿಯಾನ  ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ ಕೋವಿಡ್ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಲಾಕ್ ಡೌನ್ ಅನಿವಾರ್ಯವಾಗಿತ್ತು. ಜನಸಾಮಾನ್ಯರೇ ಲಾಕ್ ಡೌನ್ ನಿಂದ ತೊಂದರೆಯಲ್ಲಿದ್ದಾಗ ಬೀದಿಬದಿಯ ಮೂಕಪ್ರಾಣಿಪಕ್ಷಿಗಳ ಪಾಡೇನು? ಇದನ್ನು ಅರಿತು ಕೆಎಂಪಿಕೆ ಟ್ರಸ್ಟ್‌ ವತಿಯಿಂದ 60ದಿನಗಳಿಂದ ಬೆಳಗಿನ ಹೊತ್ತು ನಾಯಿಗಳಿಗೆ ಹಾಲು ಅನ್ನ ಮೊಟ್ಟೆ ಮೊಸರು ಬಿಸ್ಕೆಟ್ ಹಾಗೂ ಹಸುಗಳಿಗೆ ಮೇವು, ಚಾಮುಂಡಿಬೆಟ್ಟದಲ್ಲಿ ಕೋತಿಗಳಿಗೆ ಬಾಳೆಹಣ್ಣು ನೀಡುತ್ತಾ ಬಂದಿರುವುದು ಸಾಮಾಜಿಕ ಕಳಕಳಿಯ ಕೆಲಸವಾಗಿದೆ ಎಂದರು

ಕಾಂಗ್ರೆಸ್ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ ನಾಗರೀಕತೆಯೊಂದಿಗೆ ಜೀವಿಸುವ ಮೂಕಪ್ರಾಣಿಪಕ್ಷಿಗಳ ಸಂತತಿ ರಕ್ಷಿಸಲು ಮೈಸೂರು ನಗರಪಾಲಿಕೆ ವಲಯ ಮಟ್ಟದಲ್ಲಿ ಆಹಾರ ಪೊರೈಕೆ ಆರೋಗ್ಯ ತಪಾಸಣೆ ಕುಡಿಯುವ ನೀರು ಪೂರೈಸುವುದು ಸೇರಿದಂತೆ  ಹಲವು ಯೋಜನೆಗಳನ್ನ ಜಾರಿಗೆ ತರಬೇಕು ಎಂದು ಹೇಳಿದರು.

ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ , ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ , ಡಾ ಎಸ್ ಪಿ ಯೋಗಣ್ಣ , ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ ಡಿ ರಾಜಣ್ಣ , ಮಾಜಿ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ , ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ , ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಗೌಡ,  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್, ಲಕ್ಷ್ಮಿದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವದ್ಧಿ ನಿಗಮದ ನಿರ್ದೇಶಕರಾದ ರೇಣುಕರಾಜ್ ,  ಬನ್ನೂರು ಮಹೇಂದ್ರಸಿಂಗ್ ಕಾಳಪ್ಪ , ಕಾಂಗ್ರೆಸ್ ಮುಖಂಡರಾದ ಎನ್  ಎಂ ನವೀನ್ ಕುಮಾರ್, ಜಿ ಶ್ರೀನಾಥ್ ಬಾಬು , ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ , ಗಂಗಾಧರ್ , ಕೇಬಲ್ ಮಹೇಶ್, ಚರಣ್ ರಾಜ್, ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ , ಪರಮೇಶ್ ಗೌಡ , ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ , ಅಜಯ್ ಶಾಸ್ತ್ರಿ , ವಿನಯ್ ಕಣಗಾಲ್, ಹರೀಶ್ ನಾಯ್ಡು , ನವೀನ್ ಕೆಂಪಿ , ಅಪೂರ್ವ ಸುರೇಶ್ , ಪತ್ರಕರ್ತರಾದ ಅನಿಲ್ ಕುಮಾರ್  ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *