ಮೈಸೂರಿನಲ್ಲಿ ಕೋವಿಡ್ ಪ್ರಗತಿ ಪರಿಶೀಲನಾ ಸಭೆ ಮೈಸೂರು ಜಿ.ಪಂ ಸಭಾಂಗಣದಲ್ಲಿ ಸಭೆ ಆರೋಗ್ಯ ಸಚಿವ ಕೆ ಸುಧಾಕರ್ ನೇತೃತ್ವದಲ್ಲಿ ಸಭೆ.


ಶಾಸಕ‌ ತನ್ವೀರ್ ಸೇಠ್ ನಾಗೇಂದ್ರ ಸಭೆಯಲ್ಲಿ ಭಾಗಿ.
ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್
ಅಪರ ಜಿಲ್ಲಾಧಿಕಾರಿ ಮಂಜುನಾಥ್
ಪಾಲಿಕೆ ಆಯುಕ್ತ ಜಿ ಲಕ್ಷ್ಮೀಕಾಂತ್ ರೆಡ್ಡಿ, ಜಿ.ಪಂ ಸಿಇಓ ಎ ಎಂ ಯೋಗೇಶ್ ಡಿಎಚ್ಓ ಡಾ. ಪ್ರಸಾದ್, ಎಸ್ ಪಿ ಆರ್ ಚೇತನ್ ಡಿಸಿಪಿ ಗೀತಾ ಪ್ರಸನ್ನ ಸೇರಿ ಹಲವು ಅಧಿಕಾರಿಗಳು ಭಾಗಿ.

ಸಭೆ ಆರಂಭದಲ್ಲೇ ಲಸಿಕೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡದಂತೆ ಡಿಎಚ್‌ಓ ಡಾ ಪ್ರಸಾದ್‌ಗೆ ಸೂಚನೆ.
ಸಚಿವ ಕೆ ಸುಧಾಕರ್‌ರಿಂದ ಸೂಚನೆ
ನಾವು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿರುತ್ತೇವೆ.
ಅವರೇ ಈ ಬಗ್ಗೆ ಮಾಹಿತಿ ನೀಡುತ್ತಾರೆ.
ನೀವು ಮಾಹಿತಿ ನೀಡಿದನ್ನು ನಾನು ನೋಡಿದೆ ಅದಕ್ಕಾಗಿ‌ ಹೇಳುತ್ತಿದ್ದೇನೆ.
ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ.

ಮೈಸೂರಲ್ಲಿ ವಾಕ್ಸಿನ್ ಖಾಲಿ ಎಂದು ಅಧಿಕೃತ ವಾಗಿ ಮಾಹಿತಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವ ಸುಧಾಕರ್ ವಾರ್ನಿಂಗ್
ಡಿಎಚ್ಓ ಡಾ ಪ್ರಸಾದ್ ಅವರೇ ಇನ್ಮುಂದೆ ವಾಕ್ಸಿನ್ ಬಗ್ಗೆ ನೀವು ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ
ಡಿಸಿ ಅವರೇ ಎಲ್ಲಾ ಮಾತಾಡುತ್ತಾರೆ ಎಂದು ವಾರ್ನಿಂಗ್ ನೀಡಿದ ಸಚಿವ ಸುಧಾಕರ್

ರಾಜ್ಯದಲ್ಲಿ ಲಸಿಕೆ ಕೊರತೆಯೇ ಇಲ್ಲ ಎಂದ ಆರೋಗ್ಯ ಸಚಿವ ಸುಧಾಕರ್.
ದಿನಕ್ಕೆ ಈಗಲೂ ಎರಡು ಮೂರು ಲಕ್ಷ ಲಸಿಕೆ ಕೊಡುತ್ತಿದ್ದೇವೆ.
ಈಗಲು ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ.
ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ.
ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ.
ನಾಳೆ ಮತ್ತಷ್ಟು ಲಸಿಕೆ ರಾಜ್ಯಕ್ಕೆ ಬರಲಿದೆ.
ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು.
ಲಸಿಕೆ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ.

ರಾಜ್ಯದಲ್ಲಿ ಒಟ್ಟು 20 ಕರೋನಾ ಹಾಟ್ ಸ್ಪಾಟ್ ಗುರ್ತಿಸಿದ್ದೇವೆ.
ಮೈಸೂರಿನಲ್ಲಿ ಎರಡು ಹಾಟ್ ಸ್ಪಾಟ್ ಇದೆ.
ಪಿರಿಯಾಪಟ್ಟಣ ಹಾಗೂ ಬನ್ನೂರು ಎರಡು ಹಾಟ್ ಸ್ಪಾಟ್ ಆಗಿದೆ.
ಇದನ್ನ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ.
ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ.
ಮೈಸೂರಿನಲ್ಲಿ ಸಚಿವ ಡಾ.ಸುಧಾಕರ್ ಹೇಳಿಕೆ.

ರಾಜ್ಯದಲ್ಲಿ ಪರೀಕ್ಷೆ ನಡೆಯುವ ವಿಚಾರ.
ಮುಖ್ಯಮಂತ್ರಿಯೇ ಹೇಳಿದ ಮೇಲೆ ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ.
ಈ‌ ಬಗ್ಗೆ ಪ್ರಶ್ನೆಗೆ ವಿವರಣೆ ನೀಡಲು ನಿರಾಕರಿಸಿದ ಸಚಿವ ಸುಧಾಕರ್.

Leave a Reply

Your email address will not be published. Required fields are marked *