ರಾಜಭವನಕ್ಕೆ ಹೋಗಲು ಯತ್ನಿಸಿದ ಕರ್ನಾಟಕದ ಸಂಯುಕ್ತ ಕಿಸಾನ್ ಮೋರ್ಚಾ ರೈತ ಮುಖಂಡರ ಬಂಧನ ಬಿಡುಗಡೆ

ಕೇಂದ್ರದ ಕೃಷಿ ಕಾಯ್ದೆಗಳು ವಿರೋಧಿಸಿ ಎಂ ಎಸ್ ಪಿ ಬೆಲೆಗೆ ಶಾಸನಬದ್ಧ ಖಾತ್ರಿ ಕಾನೂನು ಜಾರಿ ತರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಇಂದು ರಾಜಭವನಕ್ಕೆ ಹೊರಟಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಸುಮಾರು 50 ಕ್ಕೂ ಹೆಚ್ಚು ರೈತ ಮುಖಂಡರನ್ನು ಬಂಧಿಸಿ ಮೈಸೂರು ರಸ್ತೆಯ ಸಿ ಎ ಆರ್ ಗ್ರೌಂಡ್ ಗೆ ಕರೆದೊಯ್ದಿದ್ದರು ನಂತರ ಬಿಡುಗಡೆಗೊಳಿಸಿದರು ಕೇಂದ್ರದ ಕೃಷಿ ಕಾಯ್ದೆ ಗಳನ್ನು ವಿರೋಧಿಸಿ ದೇಶಾದ್ಯಂತ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಒತ್ತಾಯ ಪತ್ರ ಸಲ್ಲಿಸಲು ಜ್ಞಾನಭಾರತಿ ಆಡಿಟೋರಿಯ ಬಳಿ ಹೋಗುತ್ತಿದ್ದಾಗ ಪೊಲೀಸರು ಮುಂಜಾಗೃತ ಕ್ರಮವಾಗಿ ಬಂಧಿಸುವುದಾಗಿ ತಿಳಿಸಿದರು ಇದಕ್ಕೆ ಒಪ್ಪದ ರೈತ ಮುಖಂಡರು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು ಪೊಲೀಸರು ಮುಂಜಾಗ್ರತಾ ಕ್ರಮ ಎಂದು ಬಲತ್ಕಾರವಾಗಿ ಬಂಧಿಸಿ ಕರೆದೊಯ್ದರು ರೈತ ಮುಖಂಡರಾದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕುಮಾರಕೃಪಾ ವಸತಿಗೃಹದಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ನೂರಾರು ಜನ ಎಂಎಲ್ಎ ಎಂಪಿಗಳು ಮಂತ್ರಿಗಳು ಸೇರಿ ಸಭೆ ನಡೆಸಿದರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಇಂದು ರೈತರಿಗೆ ಉಪದೇಶ ಹೇಳಲು ಬಂದಿದ್ದೀರಿ ಪೊಲೀಸರ ವರ್ತನೆ ಸರಿ ಇಲ್ಲ ರೈತರ ಹಕ್ಕೊತ್ತಾಯ ಪತ್ರ ಸಲ್ಲಿಸಲು ರಾಜಭವನಕ್ಕೆ ಹೋಗುತ್ತಿದ್ದೇವೆ ದೆಹಲಿಯಲ್ಲಿ 215 ದಿನಗಳಿಂದ ಹೋರಾಟ ಮಾಡಿ 550 ರೈತರು ಪ್ರಾಣ ಬಲಿದಾನ ಮಾಡಿದ್ದಾರೆ ಆದರೂ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿಲ್ಲ ಪ್ರಧಾನಿ ಮೋದಿಯವರು 2022ಕ್ಕೆ ರೈತರ ಆದಾಯ ದ್ವಿಗುಣಗೂಳಿಸುವ ಭರವಸೆ ನೀಡಿ ಐದು ತಿಂಗಳು ಬಾಕಿ ಇದ್ದು ರೈತರನ್ನು ಹುಸಿಗೊಳಿಸಿದ್ದಾರೆ 45 ವರ್ಷಗಳ ಹಿಂದಿನ ತುರ್ತುಪರಿಸ್ಥಿತಿ ನೆನೆಯುವ ಮಾತನಾಡುತ್ತಾರೆ ಆದರೆ ಇಂದು ಮೋದಿಯವರ ಆಡಳಿತದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ ಜಾರಿ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ರೈತ ಚಳುವಳಿಯನ್ನು ಹತ್ತಿಕ್ಕುವ ಕೆಲಸ. ಮಾಧ್ಯಮದವರ ಮೇಲೆ ಮುಖದಮ ದಾಖಲಿಸಿ ಜೈಲಿಗೆ ಕಳಿಸುತ್ತಿರುವುದು ಕೈಗನ್ನಡಿಯಾಗಿ ಕಾಣುತ್ತಿವೆ ಪ್ರಜಾಪ್ರಭುತ್ವದ ದಮನಕಾರಿ ನೀತಿಯಾಗಿದೆ ಎಂದರು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ ಸಾಮೂಹಿಕ ನಾಯಕತ್ವ ರೈತಸಂಘದ ಅಬ್ಬನಿ ಶಿವಪ್ಪ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅತ್ತಹಳ್ಳಿ ದೇವರಾಜ ಬಸವರಾಜ ಪಾಟೀಲ್ ಮಂಜುನಾಥ್ ಬಸವರಾಜ್ ಅವರಲ್ಲದೆ ಐವತ್ತಕ್ಕೂ ಹೆಚ್ಚು ರೈತ ಮುಖಂಡರು ಬಂಧಿಸಲ್ಪಟ್ಟಿದ್ದರು ಸುಮಾರು ಎರಡು ಗಂಟೆಯ ನಂತರ ಬಿಡುಗಡೆಗೊಳಿಸಿದರು ತಮ್ಮ ವಿಶ್ವಾಸಿ ಕುರುಬೂರು ಶಾಂತಕುಮಾರ್ ರಾಜ್ಯಾಧ್ಯಕ್ಷರು ಸಂಚಾಲಕರು. ಸಂಯುಕ್ತ ಕಿಸಾನ್ ಮೋರ್ಚಾ ಕರ್ನಾಟಕ

Leave a Reply

Your email address will not be published. Required fields are marked *