
ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಅಭಿಯಾನ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ 9 ರಿಂದ ಸಂಜೆ 5 ರ ಕಾಮಾಕ್ಷಿ ಆಸ್ಪತ್ರೆ , ಅಲ್ ಹನ್ಸರ್ ಆಸ್ಪತ್ರೆ ಹಾಗೂ ಪೆನೇಷಿಯ ಆಸ್ಪತ್ರೆಯ ಸಹಯೋಗದೊಂದಿಗೆ ದಿನಾಂಕ 16 ಮತ್ತು 17 ರಂದು ನೋಂದಾವಣಿ ಮಾಡಿಕೊಂಡವರಿಗೆ ಲಸಿಕೆ ನೀಡುವ ಕೆಲಸಕ್ಕೆ ಚಾಲನೆ ದೊರೆಯಿತು.

ವಾರ್ಡ್ ನಂ 43 – ಹೇಮಾವತಿ ಶಾಲೆ, ಟಿ. ಕೆ ಬಡಾವಣೆ ,ವಾರ್ಡ್ ನಂ 55 – ಸೈOಟ್ ಮೇರೀಸ್ , ಚಾಮುಂಡಿಪುರಂ ,ವಾರ್ಡ್ ನಂ 61 – ಒಕ್ಕಲಿಗ ಹಾಸ್ಟಲ್, ವಿದ್ಯಾರಣ್ಯಪುರಂ ,ವಾರ್ಡ್ ನಂ 62 – ಮಹರ್ಷಿ ಪಬ್ಲಿಕ್ ಶಾಲೆ ಜೆಪಿ ನಗರದಲ್ಲಿ
ಲಸಿಕಾ ಅಭಿಯಾನ ನೆರವೇರಿತು.
ಬೆಳಗ್ಗೆ ವಾಡ್೯ ವಾರ್ಡ್ ನಂ 55 ರ ಸೈOಟ್ ಮೇರೀಸ್ ಶಾಲೆಯಲ್ಲಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದು ಕ್ಷೇತ್ರಾದ್ಯಂತ ನಡೆದ ಲಸಿಕಾ ಅಭಿಯಾನದಲ್ಲಿ 5503 ಲಸಿಕಾ ಡೋಸ್ ಗಳನ್ನು ನೀಡಲಾಗಿದೆ.
ವಿಶೇಷವಾಗಿ ಅಭಿಯಾನಕ್ಕೆ ಸಹಕಾರ ನೀಡಿದ ಕಾಮಾಕ್ಷಿ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಆದ ಪ್ರಸನ್ನ ಹಾಗೂ ಪೆನೇಷಿಯ ಆಸ್ಪತ್ರೆಯ ಡಾ.ತುಳಸೀರಾಮ್ ಹಾಗೂ ಅಲ್ ಹನ್ಸರ್ ಆಸ್ಪತ್ರೆಯ ಡಾ. ಇಫ್ತಿಕಾರ್ ಅವರನ್ನು ಮಾನ್ಯ ಶಾಸಕರು ಸನ್ಮಾನಿಸಿದರು.
ಎಲ್ಲಾ 4 ವಾರ್ಡ್ ಗಳಲ್ಲಿ ವಿಶೇಷವಾಗಿ ಸೇವೆ ಒದಗಿಸಿದ ಆರೋಗ್ಯ ಸಿಬ್ಬಂದಿ, ವೈದ್ಯರು, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಮಾನ್ಯ ಶಾಸಕರು ಸನ್ಮಾನ ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಶೋಭಾ ಸುನಿಲ್, ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಗೋಪಿ , ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಸಂತೋಷ್ ಶಂಭು, ಪ್ರಧಾನಕಾರ್ಯದರ್ಶಿಗಳಾದ ಜೆ.ನಾಗೇಂದ್ರಕುಮಾರ್, ಓಂ ಶ್ರೀನಿವಾಸ್, ಪ್ರಮುಖರಾದ ಈಶ್ವರ್, ವಿವಿಧ ಸಂಘಸಂಸ್ಥೆಗಳ ಸ್ವಯಂಸೇವಕರು,
ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.