ಮೈಸೂರು ನಗರ ಸಿ.ಸಿ.ಬಿ ಪೊಲೀಸರಿಂದ ನಾಲ್ಕು ಲಕ್ಷ ರೂ ದ್ವಿಚಕ್ರ ವಾಹನಗಳ ವಶ ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ

ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆ ಸಂಬಂಧ ನಗರ ಪೊಲೀಸ್ ಆಯುಕ್ತರು ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವು ಖಚಿತ ವರ್ತಮಾನದ ಮೇರೆಗೆ   ಮೈಸೂರು ನಗರದ ರಾಜೀವನಗರ ಅಲ್‌ಬದರ್ ಮಸೀದಿ ಬಳಿ ಆರೋಪಿ ಅಬ್ದುಲ್ ರಹೀಮ್ @ ತೋಲ್ ಬಿನ್  ಅಮೀರ್ ಜಾನ್ ಎಂಬಾತ (21) ಚಿಕ್ಕಮ್ಮರವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ ನೀಲಕಂಠನಗರ, ನಂಜನಗೂಡು ಎಂಬುವನನ್ನು ವಶಕ್ಕೆ ಪಡೆದು, ಮತ್ತೊಬ್ಬ ಆರೋಪಿ ಅಬೀದ್ ಪಾಷ @ ಅಬೀದ್ @ ಬೈಯ್ಯ @ ಟೈಗರ್ ಬಿನ್ ಲೇ. ಶಾಂತಿನಗರದಲ್ಲಿ ವಾಸವಾಗಿದ ಅರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರ ಮಾಡಲಾಗಿ, 2ನೇ ಆರೋಪಿಯ ದುಷ್ಪ್ರೇರಣೆ ಮೇರೆಗೆ 1ನೇ ಆರೋಪಿಯು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿತರಿಂದ ನಾಲ್ಕು ಲಕ್ಷ ರೂಗಳ ಮೌಲ್ಯದ 06ದ್ವಿಚಕ್ರ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.  1ನೇ ಆರೋಪಿ ಕಳ್ಳತನ ಮಾಡಿ, ತರುತ್ತಿದ್ದ ದ್ವಿಚಕ್ರ ವಾಹನಗಳನ್ನು ೨ನೇ ಆರೋಪಿ ವಿಲೇವಾರಿ ಮಾಡುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಈ ಪತ್ತೆಕಾರ್ಯದಿಂದ ಮೈಸೂರು ನಗರ ವಿಜಯನಗರ ಪೊಲೀಸ್ ಠಾಣೆ 01, ವಿ.ವಿ.ಪುರಂ ಪೊಲೀಸ್ ಠಾಣೆ 01, ಲಷ್ಕರ್ ಪೊಲೀಸ್ ಠಾಣೆ 01, ನರಸಿಂಹರಾಜ ಪೊಲೀಸ್ ಠಾಣೆ 01 ಹಾಗೂ ಉದಯಗಿರಿ ಪೊಲೀಸ್ ಠಾಣೆ 02 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ. ವಿಚಾರಣೆಯಿಂದ 1ನೇ ಆರೋಪಿಯು ಲಷ್ಕರ್, ಉದಯಗಿರಿ ಪೊಲೀಸ್ ಠಾಣೆಗಳ ಹಳೆಯ ಎಂ.ಒ. ಆಸಾಮಿ ಎಂಬುದಾಗಿ ತಿಳಿದುಬಂದಿದ್ದು, 2ನೇ ಆರೋಪಿಯು ಆರ್.ಎಸ್.ಎಸ್. ರಾಜು ಕೊಲೆ ಪ್ರಕರಣವು ಸೇರಿದಂತೆ ಇನ್ನು ಹಲವಾರು ಕೊಲೆ ಹಾಗೂ ಕೊಲೆಗೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಣದ ಆಸೆಗಾಗಿ 1ನೇ ಆರೋಪಿಗೆ ದುಷ್ಪ್ರೇರಣೆ ಮಾಡಿ, ವಾಹನ ಕಳ್ಳತನ ಮಾಡಿಸಿ, ಕಳವು ವಾಹನಗಳನ್ನು ವಿಲೇಮಾರಿ ಮಾಡಿದ್ದನೆಂಬ ವಿಚಾರ ತಿಳಿದುಬಂದಿರುತ್ತದೆ.

ಈ ಕಾರ್ಯಾಚರಣೆಯನ್ನು ಮೈಸೂರು ನಗರದ ಡಿಸಿಪಿ ಶ್ರೀಮತಿ ಗೀತಪ್ರಸನ್ನ ರವರು ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ. ಶ್ರೀ ಸಿ.ಕೆ. ಅಶ್ವತ್ಥನಾರಾಯಣ ರವರ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಜಗದೀಶ್ ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ||ಚಂದ್ರಗುಪ್ತ, ಐ.ಪಿ.ಎಸ್ ರವರು ಪ್ರಶಂಶಿಸಿರುತ್ತಾರೆ.

Leave a Reply

Your email address will not be published. Required fields are marked *