ಮೈಸೂರು: ಬೈಕಿನಲ್ಲಿ ಬಂದ ಸರಗಳ್ಳರು, ವೃದ್ದೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ನೇತಾಜಿ ನಗರದ ನಿವಾಸಿ ಪದ್ಮ(60) ಎಂಬುವರೇ ತಮ್ಮ 35 ಗ್ರಾಂ ತೂಕದ ಚಿನ್ನ ಸರ ಕಳೆದುಕೊಂಡವರು.
ಪದ್ಮ ಅವರು ತಮ್ಮ ಮನೆಯ ಬಳಿ ಇರುವ ಡಾಕ್ಟರ್ಸ್ ಸಮುದಾಯ ಭವನದ ಸಮೀಪ ವಾಕಿಂಗ್ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ಸರಗಳ್ಳ ಚಿನ್ನದ ಸರ ಕಸಿದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ