ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪೋಸ್ಟರ್ ಬಿಡುಗಡೆ

ಮೈಸೂರು: 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ನಡೆಯುವ ವಿವಿಧ ಸರ್ಧೆಗಳ ಪೋಸ್ಟರ್ ಅನ್ನು ಮೈಸೂರು ವಿವಿ ಕುಲಪತಿ ಪ್ರೊಫೆಸರ್ ಹೇಮಂತ್‌ಕುಮಾರ್ ಬಿಡುಗಡೆಗೊಳಿಸಿದರು.

  ಆಯುಷ್ ಇಲಾಖೆ ಕರ್ನಾಟಕ ಸರ್ಕಾರ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು, ಆಹಾರ ಮತ್ತು ಪೋಷಣೆ ವಿಭಾಗ, ಮೈಸೂರು, ಮೈಸೂರು ವಿವಿಯ ಯುವರಾಜ ಕಾಲೇಜು, ಮೈಸೂರು ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಸಾಂಪ್ರದಾಯಿಕ ಅಡುಗೆಗಳು ಎಂಬ ವಿಷಯದ ಮೇಲೆ ಪ್ರಬಂಧ , ಬೆಂಕಿ ರಹಿತ ಆಹಾರ ತಯಾರಿಕೆಗೆ ಸ್ಪರ್ಧೆಗೆ ಹಣ್ಣು  ತರಕಾರಿಗಳು ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದೆ.

  ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ದೀರ್ಘಾಯುಷ್ಯಕ್ಕಾಗಿ ಆಹಾರ ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ಆಹಾರವೇ ಔಷಧ ಎಂಬ ವಿಷಯದ ಬಗ್ಗೆ ಚಿತ್ರರಚನಾ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿದೆ.

ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ  ಪ್ರಾಚಾರ್ಯ ಡಾ.ರಾಧಾಕೃಷ್ಣ ರಾಮ್, ಯುವರಾಜ ಕಾಲೇಜಿನ ಪ್ರಾಚಾರ್ಯ ಡಾ.ಯಶೋಧಾ, ಯುವರಾಜ ಕಾಲೇಜಿನ ಪ್ರೊಫೆಸರ್ ಡಾ.ಶೇಖರ್ ನಾಯಕ್ , ಡಾ. ಎಂ.ಎಸ್. ಮಹೇಶ್, ಮೈಸೂರು ಸೈನ್ಸ್ ಫೌಂಡೇಶನ್‌ನ ಜಿ.ಬಿ.ಸಂತೋಷ್ ಕುಮಾರ್ ಹಾಗೂ ವಿಶ್ವನಾಥ ಶೇಷಾಚಾರ್ ಮತ್ತು ಡಾ. ಶಿಲ್ಪಾ ಇದ್ದರು.

 ಕಾರ್ಯಕ್ರಮದ ಸಂಯೋಜಕರಾದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

20ರಂದು ಆಹಾರ ಮೇಳ:

6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗಾ ಕಾಲೇಜಿನಲ್ಲಿ ನ.20ರಂದು ಆಹಾರ ಮೇಳ ಮತ್ತು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಖ್ಯಾತ ಆಹಾರ ವಿಜ್ಞಾನಿಗಳೂ ಈ ಕಾರ್ಯಗಾರದಲ್ಲಿ ಭಾಗವಹಿಸುತ್ತಾರೆ. ಆಸಕ್ತರು ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.  hಣಣಠಿs://ಜಿoಡಿms.gಟe/SWಣಇq೪ಈmuಕಿಞಛಿW೨ಖಿ೯೮

6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ನಡೆಯುವ ವಿವಿಧ ಸರ್ಧೆಗಳ ಪೋಸ್ಟರ್ ಅನ್ನು ಮೈಸೂರು ವಿವಿ ಕುಲಪತಿ ಪ್ರೊಫೆಸರ್ ಹೇಮಂತ್‌ಕುಮಾರ್ ಬಿಡುಗಡೆಗೊಳಿಸಿದರು. ಡಾ.ರಾಧಾಕೃಷ್ಣ ರಾಮ್, ಡಾ.ಯಶೋಧಾ, ಡಾ.ಶೇಖರ್ ನಾಯಕ್ , ಡಾ. ಎಂ.ಎಸ್. ಮಹೇಶ್, ಡಾ.ಲಕ್ಷ್ಮೀನಾರಾಯಣ ಶೆಣೈ, ಜಿ.ಬಿ.ಸಂತೋಷ್ ಕುಮಾರ್, ವಿಶ್ವನಾಥ ಶೇಷಾಚಾರ್, ಡಾ. ಶಿಲ್ಪಾ , ಎಂ.ಸುಬ್ರಹ್ಮಣ್ಯ ಇದ್ದರು.