ದೇಶಾದ್ಯಂತ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ವಾಹನ ಓಡಾಟಗಾರರಿಗೆ ತಲೆಬಿಸಿಯಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ, ದೇಶದ ಜನರಿಗೆ ಅಚ್ಚೇ ದಿನಗಳು ಬರುತ್ತವೆ ಎಂದು ಹೇಳಿ, ಪೆಟ್ರೋಲ್ ಅನ್ನು 40 ರೂ. ಗೆ ನೀಡುವುದಾಗಿ ಅವರ ಪ್ರಣಾಳಿಕೆ ಯಲ್ಲಿ ಘೋಷಿಸಿತ್ತು. ಆದರೆ ಈಗ ದಿನೇದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದು ಅತ್ಯಂತ ಖಂಡನೀಯ.
ಕೇಂದ್ರದ ಬಿ.ಜೆ. ಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ನೋಟು ಅಮಾನ್ಯ, ಆರ್. ಟಿ. ಓ ಶುಲ್ಕ ವಿಪರೀತ ಹೆಚ್ಚಳ, ಜಿ.ಎಸ್.ಟಿ, ರೇರಾ ಕಾಯ್ದೆಯಂತ ಜನವಿರೋಧಿ ನಿರ್ಧಾರಗಳನ್ನು ಜಾರಿಗೆ ತಂದದ್ದು ನಿಜಕ್ಕೂ ಖಂಡನೀಯ .
ಕಳೆದ ಒಂದು ವರ್ಷದಿಂದ ಕೊರೊನಾ, ಲಾಕ್ಡೌನ್ ನಿಂದಾಗಿ ದೇಶದ ಜನರೆಲ್ಲ ತತ್ತರಿಸಿಹೋಗಿದ್ದಾರೆ. ಜನರ ಆದಾಯವೇ ನಿಂತುಹೋಗಿ, ಒಂದು ಹೊತ್ತು ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಕೇಂದ್ರ ಪೆಟ್ರೋಲ್ ಅನ್ನು 100 ರೂ. ದಾಟಿ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ ಹಾಗು ದಿನೇ ದಿನೇ ಎಲ್ಲಾ ಅತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಜನರ ಗಾಯದ ಮೇಲೆ ಬರ ಎಳೆದಂತಾಗಿದೆ.
ಇಂತಹ ಕಠಿಣ ಸಮಯದಲ್ಲೂ, ಕೇಂದ್ರ ಸರಕಾರ ಒಂದು ಕಡೆ ಆರ್ಥಿಕ ನೆರವು ಘೋಷಣೆ ಮಾಡಿ, ಮತ್ತೊಂದು ಕಡೆ ದರ ಹೆಚ್ಚಳದಿಂದ ಮತ್ತೆ ವಾಪಸ್ ಪಡೆಯುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.
ಮೊನ್ನೆ ಶುಕ್ರವಾರ ಬೆಂಗಳೂರಿನಲ್ಲಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ” ತೈಲ ಬೆಲೆ ನಿಯಂತ್ರಣ ರಾಜ್ಯಸರ್ಕಾರಗಳ ಕೈಯಲ್ಲಿದೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ. ಎಸ್. ಟಿ ವ್ಯಾಪ್ತಿಗೆ ತರಲು ಯಾವುದೇ ಅಡ್ಡಿ ಇಲ್ಲ ” ಎಂದು ಹೇಳಿರುವುದು ನಿಜಕ್ಕೂ ದೇಶದ ಜನರಿಗೆ ಸಂತೋಷದ ಸಂಗತಿ. ಅವರು ಹೇಳಿರುವಂತೆ ಈ ಕೊರೊನಾ ಕಷ್ಟದ ಸಮಯದಲ್ಲಿ ಈ ಕೂಡಲೇ ಕೇಂದ್ರ-ರಾಜ್ಯ ಸರ್ಕಾರಗಳು ಜಿ.ಎಸ್. ಟಿ ಕೌನ್ಸಿಲ್ ಸಭೆ ನಡೆಸಿ, ಅಲ್ಲಿ ಒಪ್ಪಿಗೆ ಅನುಮೋದಿಸಿ, ” ಒಂದೇ ದೇಶ ಒಂದೇ ತೆರಿಗೆ ” ಎಂಬಂತೆ ಪೆಟ್ರೋಲ್-ಡೀಸೆಲ್ ಅನ್ನು ಜಿ. ಎಸ್. ಟಿ ವ್ಯಾಪ್ತಿಗೆ ಸೇರಿಸಿ ದೇಶದ ಜನರಿಗೆ ನಿಜವಾದ ಅಚ್ಚೇ ದಿನಗಳನ್ನು ಈಗಲಾದರೂ ನೀಡಬೇಕೆಂದು ಆಗ್ರಹಿಸಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿಯನ್ನು ನೀಡುತ್ತಿದ್ದೇವೆ.
ಪ್ರತಿಭಟನೆ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಡಾ ಶಾಂತರಾಜೇಅರಸ್ ಪಿ, ವಿಜಯೇಂದ್ರ, ಡಾ. ಮೊಗಣ್ಣಾಚಾರ್, ಕುಮಾರ್ ಗೌಡ, ಉಪ್ಪಾರ ಸಂಘದ ಅಧ್ಯಕ್ಷ ಎಸ್.ಯೋಗೀಶ್, ಎಳನೀರು ರಾಮಣ್ಣ, ದರ್ಶನ್ ಗೌಡ, ಗೊರೂರು ಮಲ್ಲೇಶ್, ಗಣೇಶ್ ಪ್ರಸಾದ್, ಸ್ವಾಮಿ, ಮಂಜುನಾಥ್, ಬಸವರಾಜು,ರವಿ ನಾಯಕ್, ಚಂದ್ರ ಉಪಸ್ಥಿತರಿದ್ದರು.