ಕಾವಿ ಕಳಚಿ, ಖಾದಿ ಧರಿಸಿ’ ಎಂದು ಒತ್ತಾಯಿಸಿ ಪ್ರತಿಭಟನೆ

ಬೆಂಗಳೂರಿನಲ್ಲಿ ಸಿಎಂ ಪರ ಮಠಾಧಿಪತಿಗಳ ಸಮಾವೇಶ ಹಿನ್ನೆಲೆಯಲ್ಲಿ
ಕಾವಿ ಕಳಚಿ, ಖಾದಿ ಧರಿಸಿ’ ಎಂದು ಒತ್ತಾಯಿಸಿ ಪ್ರತಿಭಟನೆ.

ಮೈಸೂರಿನಲ್ಲಿಮಠಾಧೀಪತಿಗಳ ವಿರುದ್ಧ ವಿಭಿನ್ನ ರೀತಿಯಲ್ಲಿ ನಗರದ ಕೋರ್ಟ್ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕಾವಿ ಧರಿಸಿ ಮಠಾಧೀಪತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದುಳಿದ ವೇದಿಕೆಯ ಅಧ್ಯಕ್ಷ ಕೆ.ಶಿವರಾಮು ಹಾಗೂ ವೇದಿಕೆ ಬೆಂಬಲಿಗರುಗಳು ಮಠಗಳು ಎಲ್ಲರ ಆಸ್ತಿ, ಮಠಾಧೀಪತಿಗಳ ಗೌರವ ಉಳಿಯಲಿ ಎಂದು ಪ್ರತಿಭಟನೆಯಲ್ಲಿ ಘೋಷಣೆ ಕೂಗಿದರು

ಸಿಎಂ ಬಿಎಸ್ವೈ ಪರ ಬೆಂಬಲ ಸೂಚಿಸಿದ ಮಠಾಧೀಪತಿಗಳ ವಿರುದ್ಧ ಕಿಡಿ ಕಾರಿದ ವೇದಿಕೆ ಪದಾಧಿಕಾರಿಗಳು. ನಗರದ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ.

ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Leave a Reply

Your email address will not be published. Required fields are marked *