ಕರ್ನಾಟಕ ಸೇನಾ ಪಡೆ ವತಿಯಿಂದ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮ

ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ವಿವೇಕಾನಂದ ನಗರ ವೃತ್ತ ದಲ್ಲಿ ಆಯೋಜಿಸಿದ್ದ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಸಮಂಜರಿ ಕಾರ್ಯಕ್ರಮ ಹಾಗು ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮವನ್ನು ನೂತನ ವಿಧಾನ ಪರಿಷತ್ ಸದಸ್ಯ ಶ್ರೀ ಸಿ ಎನ್ ಮಂಜೇಗೌಡ ಉದ್ಘಾಟನೆ ಮಾಡಿ ಮಾತನಾಡಿ ” ಕನ್ನಡ ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಆಚರಿಸಬೇಕು. ಕನ್ನಡ ರಾಜ್ಯೋತ್ಸವದ ಆಚರಣೆ ಬರೀ ಒಂದು ದಿನಕ್ಕೆ,  ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರವಾಗಿ ಬರವಣಿಗೆಯಲ್ಲಿ,  ಆಡುವ ಮಾತಿನಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸಿ ಬೆಳೆಸಬೇಕು ಎಂದರು ಎಂದರು.

ಜತೆಗೆ ಪುನೀತ್ ರಾಜಕುಮಾರ್ ರವರು ಎಲೆ ಮರಿ ಕಾಯಿಯಂತೆ ಇದ್ಧಂತಹ ನಟ. ಬಹುಶಃ ಅವರು ಇರುವ ತನಕ ಅವರು ಮಾಡುತ್ತಿದಂತಹ ಸಮಾಜ ಸೇವಾ ಕಾರ್ಯಗಳು ಯಾರಿಗೂ ತಿಳಿದಿರಲಿಲ್ಲ. ಅವರು ದೈವಾಧೀನರಾದ ನಂತರ ಅವರು ಸಂಪಾದಿಸಿದ್ದ ಅಭಿಮಾನಿ ಬಳಗ ಹಾಗು ಅವರು ಮಾಡಿರುವ ಧಾನಧರ್ಮದ ಕೆಲಸಗಳು ಬೆಳಕಿಗೆ ಬಂದವು. ದೇಶದ ಇತಿಹಾಸದಲ್ಲಿಯೇ ನಟನೊಬ್ಬನ ಅಂತಿಮ ದರ್ಶನಕ್ಕೆ ಸುಮಾರು 30 ಲಕ್ಷಕ್ಕಿಂತ ಅಧಿಕ ಜನರು ಬಂದಿದ್ದದ್ದು ಗಿನ್ನೀಸ್ ದಾಖಲೆಯಾದಂತಿದೆ. ಜನರು,  ಪ್ರತಿಯೊಬ್ಬರೂ ಪುನೀತ್ ರಂತೆ ಸರಳ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎಂದರು. 

ಪ್ರತಿ ವರ್ಷ ಕರ್ನಾಟಕ ಸೇನಾ ಪಡೆ ವತಿಯಿಂದ ಕೊಡಮಾಡುವ ” ಕರುನಾಡ ಶ್ರೀ ಹಾಗು ಕೊರೊನಾ ವಾರಿಯರ್ ಪ್ರಶಸ್ತಿ ” ಯನ್ನು ಈ ಬಾರಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬಡವರು, ನಿರ್ಗತಿಕರುಗಳಿಗೆ ತಿಂಗಳುಗಟ್ಟಲೆ ತಿಂಡಿ, ಊಟ, ಆಹಾರ ಕಿಟ್ ಗಳನ್ನು ವಿತರಣೆ ಮಾಡಿ ಜನಸೇವೆ ಮಾಡಿದ್ದ ನಾಡಪ್ರಭು ಕೆಂಪೇಗೌಡ ಸಹಕಾರ ಸಂಘದ ಅಧ್ಯಕ್ಷ ಶ್ರೀ ಗಂಗಾಧರ್ ಸಿ ಜಿ ರವರಿಗೆ ಪ್ರಧಾನ ಮಾಡಲಾಯಿತು.