ಆರ್.ಟಿ.ಓ. ಇಬ್ಬರೂ ಆಧಿಕಾರಿಗಳು ಎಸಿಬಿ ಬಲೆಗೆ

ಚಾಲನಾ ಪರವಾನಗಿಗೆ ಆರ್ಟಿಒ ಇನ್ಸ್ಪೆಕ್ಟರ್, ಮಧ್ಯವರ್ತಿ ಲಂಚ ಸ್ವೀಕಾರ ವೇಳೆ ದಾಳಿ ನಡೆಸಿದ ಎಸಿಬಿ

ಮೈಸೂರು: ಚಾಲನಾ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರ್ಟಿಒ ಇನ್ಸ್ಪೆಕ್ಟರ್ ಹಾಗೂ ಮಧ್ಯವರ್ತಿ ಇಬ್ಬರ ಮೇಲೆ ಶನಿವಾರ ಎಸಿಬಿ ಪೆÇಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೀವ್ ನಗರದಲ್ಲಿರುವ ಆರ್.ಟಿ.ಓ ಪೂರ್ವ ಕಚೇರಿಯ ಇನ್ಸ್ಪೆಕ್ಟರ್ ಎಂ.ವಿ.ಪ್ರಭಾಕರ್ ಹಾಗೂ ತಮ್ಮ ಮಧ್ಯವರ್ತಿ ಮಹೇಶ್ ಮೂಲಕ 77 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿಗೆ ಸಿಕ್ಕಿ ಬಿದ್ದವರಾಗಿದ್ದಾರೆ. ಕಲ್ಯಾಣಗಿರಿ ನಗರದ ಸಾಜಿದ್ ಅಬ್ರಾರ್ ಎಂಬಾತ ಭಾರತ್ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು, ತಮ್ಮ ಚಾಲನಾ ತರಬೇತಿ ಶಾಲೆಯಲ್ಲಿ ದಾಖಲಾಗಿದ್ದ 85 ಜನರಿಗೆ  ಡ್ರೈವಿಂಗ್ ತರಬೇತಿ ನೀಡಿ, ಹೊಸದಾಗಿ ಡಿಎಲ್ಗೆ ಸರ್ಕಾರಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ್ದರು.

ಈ ವೇಳೆ ಐಎಂವಿ ಇನ್ಸ್ಪೆಕ್ಟರ್ ಆದ ಪ್ರಭಾಕರ್, ಡಿಎಲ್ ನೀಡಲು 80 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. 77 ಸಾವಿರ ರೂ.ವನ್ನು ತಮ್ಮ ಖಾಸಗಿ ಸಹಾಯಕ ಮಹೇಶ್ಗೆ ನೀಡುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಸಾಜಿದ್ ಅಬ್ರಾರ್ ಎಸಿಬಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

 ಶನಿವಾರ ಕಚೇರಿಯಲ್ಲಿ  ಸಾಜಿದ್ ಅಬ್ರಾರ್, ಸಹಾಯಕ ಮಹೇಶ್ಗೆ 77 ಸಾವಿರ ರೂ. ಹಣ ನೀಡುವಾಗ ದಾಳಿ ನಡೆಸಿದ ಎಸಿಬಿ ಪೆÇಲೀಸರು ಇಬ್ಬರನ್ನು ಬಂಧಿಸಿದ್ದು, ಈ ಸಂಬಂಧ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *