ಖ್ಯಾತ ನಟ ರಘುವೀರ್ ಮಗಳು ಹಾಗು ಅಳಿಯನನ್ನ ನೋಡಿ…ಹೇಗಿದ್ದಾರೆ ಎಂದು ಮೊದಲಬಾರಿ

ಬಣ್ಣದ ಲೋಕದಲ್ಲಿ ಕಥೆಯನ್ನು ಹೇಳಲು ಬರುವ ಅದೆಷ್ಟೋ ನಟ, ನಿರ್ದೇಶಕರ ಜೀವನವೇ ಒಂದುಬರೀತಿಯಲ್ಲಿ ಕಥೆಯಾಗಿಬಿಡುತ್ತದೆ. ಹೌದು ಸಿನಿಮಾರಂಗದಲ್ಲಿ ನಿರತರಾಗಿರುವ ಸಾಕಷ್ಟು ತಾರೆಯರ ವೈವಾಹಿಕ ಜೀವನ ತೂತು ಮಡಕಿ ಯಂತಾಗಿದ್ದು ಸಂಬಂಧ ಮುರಿದು ಬಿದ್ದಿರುತ್ತದೆ. ರೀಲ್ ನಲ್ಲಿ ಗೆದ್ದರೂ ಕೂಡ ರಿಯಲ್ ಲೈಫ್ ನಲ್ಲಿ ಸೋತಿರುತ್ತಾರೆ. ಸಿನಿಮಾ ಎಂಬ ಬಣ್ಣದ ಪ್ರಪಂಚದಿಂದ ಹಣ, ಆಸ್ತಿ, ಅಂತಸ್ತು, ಸಂಬಂಧಿಕರನೆಲ್ಲಾ ಕಳೆದುಕೊಂಡು, ಕೊನೆಯಲ್ಲಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಅದೆಷ್ಟೋ ಉದಾಹರಣೆಗಳಿವೆ.

ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಚೈತ್ರದ ಪ್ರೇಮಾಂಜಲಿ ಚಿತ್ರದ ನಾಯಕ ನಟ ರಘುವೀರ್ ಅವರ ಬದುಕನ್ನ ನೋಡುವುದಾದರೆ ಇವರನ್ನು ದುರಂತ ನಾಯಕ ಅಂತಾನೇ ಹೇಳಬಹುದು. ಹೌದು ಯಾಕೆಂದರೆ ಇವರ ಬಳಿ, ಆಸ್ತಿ-ಅಂತಸ್ತು, ಯೋಗ-ಯೋಗ್ಯತೆ, ಮತ್ತು ಮುಂದಿನ ತಲೆಮಾರು ಕೂತು ತಿಂದರು ಕರಗದಷ್ಟು ಆಸ್ತಿ-ಪಾಸ್ತಿಯನ್ನು ಹೊಂದಿದ್ದರು. ಆದರೆ ಕೊನೆಯಲ್ಲಿ ಯಾವುದನ್ನು ಕೂಡ ಅನುಭವಿಸದೆ ಕಣ್ಣುಮುಚ್ಚಿಕೊಳ್ಳುತ್ತಾರೆ. ರಘುವೀರ್ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದು, ಎಸ್ ನಾರಾಯಣ್ ಅವರ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ.

ಇದಕ್ಕೂ ಮುನ್ನ ನಟ ಮುರುಳಿ ಅವರೊಂದಿಗೆ ಅಜಯ್ ವಿಜಯ್ ಎಂಬುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದರು ಅಲ್ಲದೇ ಖೈಲಾ ಬಾಬು, ಯಾದ್ಗಾರ್, ಚಮೇಲಿ ಕಿ ಶಾದಿ ಎಂಬುವ ಮೂರು ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಚೈತ್ರದ ಪ್ರೇಮಾಂಜಲಿ ಮಾತ್ರ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು.ನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ರಘುವೀರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತನ್ನ ಪ್ರೀತಿಯ ಮಡದಿ ಹಾಕು ಹೆಣ್ಣು ಮಗುವನ್ನು ಬಿಟ್ಟು ಇಹಲೋಕಕ್ಕೆ ತ್ಯಜಿಸಿಬಿಡುತ್ತಾರೆ. ಹಾಗಾದರೆ ರಘುವೀರ್ ಅವರ ಪುತ್ರಿ ಯಾರು ಗೊತ್ತಾ.

ನ್ನಡ ಚಿತ್ರರಂಗದ ಭರವಸೆಯ ನಟ ರಘುವೀರ್ ಅವರ ಪ್ರೀತಿಯ ಪುತ್ರಿಯ ಹೆಸರು ಶ್ರೇಯಾ ಎಂಬುದಾಗಿದ್ದು ಪ್ರಸ್ತುತ ಅವರು ಚೆನ್ನೈನಲ್ಲಿ ನೆಲೆಸಿದ್ದಾರೆ.ತನ್ನ ತಾಯಿ ಇಹಲೋಕ ತ್ಯಜಿಸಿದ ಬಳಿಕ ತಾತ ಅಜ್ಜಿಯ ಜೊತೆಯಲ್ಲಿಯೇ ಬೆಳೆದ ಶ್ರೇಯಾ ಅವರು ತಮ್ಮ ವಿದ್ಯಾಭ್ಯಾಸ ಹಾಗೂ ಉದ್ಯೋಗ ಎಲ್ಲವನ್ನು ಕೂಡ ಚೆನ್ನೈನಲ್ಲಿಯೇ ಮುಗಿಸಿದ್ದಾರೆ. ಸದ್ಯ ಇದೀಗ ಇವರ ವಿವಾಹ ಕೂಡ ಜರುಗಿದ್ದು, ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಶ್ವಿನ್ ಅವರನ್ನು ವರಿಸಿದ್ದಾರೆ. ಇನ್ನು ಅಶ್ವಿನ್ ಅವರ ಕುಟುಂಬದ ಪರಿಚಯಸ್ಥರೇ ಆಗಿರುವುದು ವಿಶೇಷ.

ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಅಶ್ವಿನ್ ಹಾಗೂ ಶ್ರೇಯಾ ಜೊತೆಯಲ್ಲಿಯೇ ಬೆಳೆದಿದ್ದು ಈಗ ಅವರು ವಿವಾಹ ಮಾಡಿಕೊಳ್ಳುವ ಮೂಲಕ ಸಂಬಂಧಿಗಳಾಗಿದ್ದಾರೆ. ಶ್ರೇಯಾ ಮತ್ತು ಅಶ್ವಿನ್‌ ದಂಪತಿಗಳಿಗೆ ಈಗ ಒಂದು ಮಗುವೂ ಇದೆ. ಈ ವಿವಾಹ ಸಮಾರಂಭಕ್ಕೆ ರಘುವೀರ್‌ ಅವರ ಸಂಬಂಧಿಕರು ಕೂಡ ಬೆಂಗಳೂರಿನಿಂದ ತೆರಳಿದ್ದರು. ಇನ್ನು ಶ್ರೇಯಾ ಅವರಿಗೆ 16 ವರ್ಷದಲ್ಲಿದ್ದ ವೇಳೆಗೆ ಅಶ್ವಿನ್‌ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು ಎಂದೇ ಹೇಳಲಾಗುತ್ತಿದ್ದು, ರಘುವೀರ್‌ ಅವರು ಕೂಡ ಅಶ್ವಿನ್‌ ಅವರನ್ನು ಭೇಟಿ ಮಾಡಿದ್ದರು.

ಭೇಟಿ ಮಾಡುವುದಕ್ಕೂ ಮುನ್ನಾ ಪ್ರೀತಿ ವಿಚಾರ ರಘುವೀರ್‌ ಅವರಿಗೆ ತಿಳಿದಿದ್ದರೂ ಕೂಡ ಆಕೆಯನ್ನು ಆ ವಿಚಾರವಾಗಿ ಯಾವುದೇ ಪ್ರಶ್ನೆ ಮಾಡಿರಲಿಲ್ಲ.ಅಶ್ವಿನ್‌ ಅವರು ತಮಿಳು ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜೀವರವಿ ಅವರ ಪುತ್ರರಾಗಿದ್ದು ಪ್ರಸ್ತುತ ಶ್ರೇಯಾ ಹಾಗೂ ಅಶ್ವಿನ್‌ ಅವರು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *