ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಹೊಸಬಂಡಿಕೆರೆಯ ಮೇದರಕೇರಿಯಲ್ಲಿ ಶಾಲಾ ಮಕ್ಕಳಿಗೆ ಓದುವ ಸಾಮಗ್ರಿಗಳನ್ನು ನೀಡುವ ಮೂಲಕ ರಾಕೇಶ್ ಸಿದ್ದರಾಮಯ್ಯ ರವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಪುಸ್ತಕ ಸಾಮಗ್ರಿಗಳನ್ನು ನೀಡಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ರಾಕೇಶ್ ಸಿದ್ದರಾಮಯ್ಯ ರವರು
ಒಬ್ಬ ಒಳ್ಳೆಯ ಯುವ ನಾಯಕರಾಗಿ ಹೊರಹೊಮ್ಮುತ್ತಿದ್ದರು ಆದರೆ ದುರ್ದೈವವಶಾತ್ ಅವರು ಸಣ್ಣ ವಯಸ್ಸಿಗೆ ಮರಣ ಹೊಂದಿದ್ದರಿಂದ ಇವತ್ತು ಮೈಸೂರಿನಲ್ಲಿ ಬಹಳಷ್ಟು ಜನ ಬಡವರು ಮತ್ತು ನಿರಾಶ್ರಿತರು ಒಳ್ಳೆ ಒಬ್ಬ ನಾಯಕನನ್ನು ಕಳೆದುಕೊಂಡಂತಾಗಿದೆ ನೋವಿನ ಸನ್ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಮೈಸೂರಿನ ಭಾಗದ ಬಹಳಷ್ಟು ಜವಾಬ್ದಾರಿಯನ್ನು ರಾಕೇಶ್ ಸಿದ್ದರಾಮಯ್ಯ ರವರು ಹೊರುತ್ತಿದ್ದರು ಇವತ್ತು ಆ ಜವಾಬ್ದಾರಿಯನ್ನು ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ರವರು ಶಾಸಕರಾಗಿ ನಿಭಾಯಿಸುತ್ತಿದ್ದು ಮುಂಬರುವ ದಿನಗಳಲ್ಲಿ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ ರವರು ರಾಕೇಶ್ ರವರ ಜವಾಬ್ದಾರಿಯನ್ನು ಸೇರಿ ಜನರಿಗೆ ಸ್ಫೂರ್ತಿಯಾಗಿ ಎಲ್ಲಾ ರೀತಿಯಲ್ಲೂ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು,
ಕೋವಿಡ್ ಮೂರನೇ ಅಲೆ ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಬಹಳಷ್ಟು ಹುಷಾರಾಗಿ ಇರತಕ್ಕಂತ 1ಜವಾಬ್ದಾರಿಯನ್ನು ಪೋಷಕರು ನಿಭಾಯಿಸಬೇಕು ಹಾಗೂ ಮಕ್ಕಳಿಗೆ ಆದಷ್ಟು ಬೇಗ ಸರ್ಕಾರದವರು ಲಸಿಕೆಯನ್ನು ಹಣ ನೀಡಿ ಆನಂತರ ಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಸಿದ್ದರಾಮಯ್ಯ ಅಭಿಮಾನಿ ಬಳಗದ ಬಸವರಾಜ್ ಬಸಪ್ಪ ,ತೀರ್ಥಕುಮಾರ್ ,ಎಂ ಪಿ ಶಿವಶಂಕರ್ ,ಎಂ ಮಾರೇಗೌಡ ,ಪಾಂಡು ನಾರಾಯಣ ,ಭೋಜರಾಜ್ ,ಪ್ರೇಮ್ ಕುಮಾರ್ ,ಮಹೇಶ,ಹಾಗೂ ಇನ್ನಿತರರು ಹಾಜರಿದ್ದರು