12-7-2021 ಸೋಮವಾರದ ದಿನ ಭವಿಷ್ಯ

ಶ್ರೀ , ತ್ರಿಪುರ ಸುಂದರಿ ಜ್ವಾಲಾಮುಖಿ ಅಮ್ಮನವರ ನೆನೆದು ಈ ದಿನದ ರಾಶಿಫಲ ನೋಡೋಣ

ಮೇಷ ರಾಶಿ

ಗೆಲುವಿನ ಲಯಕ್ಕೆ ಮರಳಲು ನಿಮ್ಮಲ್ಲಿರುವ ಸೋಮಾರಿತನವನ್ನು ತೆಗೆದುಹಾಕಿ. ಬಿಸಿಲು ಬಿರುಗಾಳಿಗೆ ಅಂಜಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆಪ್ತ ಜನಗಳು ತಮ್ಮ ಸಮಯಕ್ಕೆ ಉಪಯೋಗಿಸಿಕೊಳ್ಳುವುದು ಹಾಗೂ ಸಮಯದ ನಂತರ ದೂರ ತಳ್ಳುವರು, ನೀವು ಎಚ್ಚರದಿಂದಿರಿ. ಸ್ವತಂತ್ರದಿಂದ, ಸ್ವಇಚ್ಛೆಯಿಂದ ಕಾರ್ಯವನ್ನು ಮಾಡಿ ಎಷ್ಟೇ ಹಣ ಬಂದರೂ ನಿಮಗೆ ಸಂತೋಷ ಕೊಡುತ್ತದೆ. ಹಂಗಿನ ಅರಮನೆಗಿಂತ ಸ್ವಂತದ ಗುಡಿಸಲು ಲೇಸು ಎಂಬಂತೆ ಬಾಳಿರಿ.

ವೃಷಭ ರಾಶಿ

ಇತ್ತೀಚಿಗೆ ಯಾವ ಕಾರ್ಯದಲ್ಲೂ ಹೋದರು ಶತ್ರುತ್ವ ಸಂಪಾದನೆ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಪ್ರತಿಷ್ಠೆಯ ಭಾವನೆ ಹಾಗೂ ಮಾತಿನ ಭರಾಟೆ ಆದಷ್ಟು ನಿಯಂತ್ರಣದಲ್ಲಿಡಿ. ಕುಟುಂಬಸ್ಥರ ನೋವು ನಲಿವುಗಳಲ್ಲಿ ನೀವು ಸಹ ಪಾಲ್ಗೊಳ್ಳಿ. ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ, ಏಕೆಂದರೆ ನಿಮ್ಮ ಎಲ್ಲಾ ಧನಾತ್ಮಕ ಶಕ್ತಿ ಇರುವುದು ನಿಮ್ಮ ಕುಟುಂಬದಲ್ಲಿ ಮಾತ್ರ ನೆನಪಿಡಿ.

ಮಿಥುನ ರಾಶಿ

ಯೋಜನೆಗಳ ಸಮಗ್ರ ದೃಷ್ಟಿ ಹಾಗೂ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವುದು ಉತ್ತಮವಾಗಿ ಮುಂದಿನ ಹಂತದಲ್ಲಿ ಕಾರ್ಯ ಯಶಸ್ವಿಯಾಗಲು ಸಹಕಾರಿಯಾಗುತ್ತದೆ. ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳಲ್ಲಿ ಭಿನ್ನಾಭಿಪ್ರಾಯ ಬಂದರೆ ನಿಮ್ಮ ಪಾಡಿಗೆ ಇದ್ದು ಬಿಡಿ ನಿಮ್ಮ ಕೆಲಸ ಶಕ್ತರಾಗಿ ಮಾಡಿ ಮುಗಿಸಿ ಎಲ್ಲರೂ ಸುಮ್ಮನಾಗುವರು.

ಕರ್ಕಾಟಕ ರಾಶಿ

ಇಂದು ನಿಮ್ಮ ಪತ್ನಿಯೊಡನೆ ಗಂಭೀರವಾದ ವಿಷಯದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಕ್ಕಳು ಕುತೂಹಲಕಾರಿಯಾದಂತಹ ಆಸಕ್ತಿ ಬೆಳೆಸಿಕೊಳ್ಳುವರು ಅವರ ಇಷ್ಟಕ್ಕೆ ನಿಮ್ಮ ಬೆಂಬಲ ಸಹ ಇರಲಿ. ಆರ್ಥಿಕ ಹಿತದೃಷ್ಟಿಯಿಂದ ವ್ಯವಹಾರ ದಲ್ಲಿ ಶಿಸ್ತು ಬೆಳೆಸಿಕೊಳ್ಳುವುದು ಬಹುಮುಖ್ಯ, ಹಣಕಾಸಿನಲ್ಲಿ ಸಡಿಲ ತನ ಬೇಡವೇ ಬೇಡ.

ಸಿಂಹ ರಾಶಿ

ಮನದಲ್ಲಿ ಮೂಡುವ ಹಿಂಜರಿಕೆ ಭಾವನೆ ಎದುರಿಸಬೇಕಾಗುತ್ತದೆ. ಧೈರ್ಯ ಸರ್ವತ್ರ ಸಾಧನ ಎಂಬುದನ್ನು ನೆನಪಿಡಿ ಮುಂದೆ ಸಾಗಿ. ಇಂದು ನಿರೀಕ್ಷಿತ ಕೆಲಸ ಪೂರ್ಣಗೊಳಿಸಲು ಬಂಡವಾಳದ ಕೊರತೆ ಎದುರಿಸಬೇಕಾಗುತ್ತದೆ ಇದರಿಂದ ಸಾಲದ ಮೋರೆ ಹೋಗುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾಗಿ ಸಾಗಿದರು ಹಣಕಾಸಿನಲ್ಲಿ ನಿರಾಶಾದಾಯಕ ವಾಗಿರುತ್ತದೆ. ಆರ್ಥಿಕ ಯೋಜನೆಗಳಿಗೆ ತಡಮಾಡದೆ ಚೈತನ್ಯ ನೀಡಿ.

ಕನ್ಯಾ ರಾಶಿ

ಉದ್ಯೋಗಗಳಲ್ಲಿ ಏರಿಳಿತ ಕಾಣಬಹುದು. ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನು ಗುರಿ ಮಾಡಬಹುದು ಇದರಿಂದ ಸಂಘರ್ಷದ ವಾತಾವರಣ ಸೃಷ್ಟಿ ಆಗುತ್ತದೆ. ಜೀವನ ಎಂಬುವುದು ಪರಸ್ಪರ ಪ್ರೀತಿ ಪ್ರೇಮದಿಂದ ಅರಿತು ಬಾಳುವುದು ನಿಮ್ಮದೇ ಸಿದ್ದಾಂತ ನಡೆಯಬೇಕು ಎಂಬುದು ನಿಮ್ಮ ಹಟ ಸಾಧನೆ ಒಳ್ಳೆಯದಲ್ಲ.

ತುಲಾ ರಾಶಿ

ಮಾತಿನಿಂದ ಸೌಧವನ್ನು ನಿರ್ಮಿಸುವುದು ನಿಮ್ಮ ಕೌಶಲ್ಯ ಇದರಿಂದಲೇ ವ್ಯಾಪಾರ ವ್ಯವಹಾರದಲ್ಲಿ ಧನ ಸಂಪತ್ತು ವೃದ್ಧಿ ಆಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮ ವೃತ್ತಿರಂಗದಲ್ಲಿ ವಿನೂತನ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಆದಷ್ಟು ಎಚ್ಚರಿಕೆ ವಹಿಸಿ ಇದರಿಂದ ನಿಮ್ಮ ಲಾಭಾಂಶದ ಲೆಕ್ಕಾಚಾರವನ್ನು ಪರಿಗಣಿಸಿ

ವೃಶ್ಚಿಕ ರಾಶಿ

ನಿಮ್ಮ ಮನಸ್ಸಿನಲ್ಲಿ ಇರುವಂತಹ ಜಮೀನು ಖರೀದಿ ಅಥವಾ ಗೃಹ ಖರೀದಿಯ ಬಯಕೆಯ ಪೂರ್ಣಗೊಳ್ಳುತ್ತದೆ. ಮಕ್ಕಳ ವಿಷಯದಲ್ಲಿ ಇಂದು ಹೆಚ್ಚು ಸಂತೋಷ ಪಡುವಿರಿ ಅವರ ಜ್ಞಾನಾರ್ಜನೆಗಾಗಿ ವಿಶೇಷವಾದಂತಹ ಕಾರ್ಯ ಸಂಕಲ್ಪಗಳ ಗಳನ್ನು ಮಾಡುವಿರಿ. ಪತ್ನಿಯು ನಿಮ್ಮನ್ನು ಅತಿ ಹೆಚ್ಚಾಗಿ ಬೇಕು ಬೇಡಗಳ ಪಟ್ಟಿಯನ್ನು ತಯಾರಿಸುವರು, ಪ್ರೇಮ ಪ್ರೀತಿ ಇಂದ ನಿಮಗಾಗಿ ವಿಶೇಷವಾದ ಖಾದ್ಯಗಳನ್ನು ತಯಾರಿ ಮಾಡಿ ಕೊಡುವರು. ಕಾರ್ಯ ಪೂರ್ಣಗೊಳಿಸಲಾಗದೆ ಒದ್ದಾಡುವ ಪರಿಸ್ಥಿತಿ ನಿಮ್ಮದಾಗಿದೆ. ಮಾನಸಿಕ ಖಿನ್ನತೆಗಳು ನಿಮ್ಮನ್ನು ಆವರಿಸಲಿದೆ.

ಧನಸ್ಸು ರಾಶಿ

ನಿಮ್ಮ ಕೌಶಲ್ಯದಲ್ಲಿ ಹೊಸ ವಿಚಾರಗಳನ್ನು ರೂಢಿಸಿಕೊಳ್ಳಿ. ನಿಮ್ಮ ವಿರುದ್ದವಾಗಿ ಮಾತನಾಡುವ ಮಂದಿಯನ್ನು ಆದಷ್ಟು ನಿರ್ಲಕ್ಷಿಸಿ. ಆರೋಪಗಳನ್ನು ಮಾಡುವವರು ಮಾಡಲಿ ನಿಮ್ಮ ಕೃತಿಯಿಂದ ಅವರಿಗೆ ತಕ್ಕ ಫಲಿತಾಂಶ ವನ್ನು ನೀಡಲು ತಯಾರಾಗಿ. ನಿಮ್ಮಲ್ಲಿರುವ ಆಲಸ್ಯತನ ಜಡತ್ವ ನಿಮಗೆ ಸಮಸ್ಯೆಯನ್ನು ತಂದೊಡ್ಡಬಹುದು ಆದಕಾರಣ ಹೆಚ್ಚಾಗಿ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಿ. ಕುಲದೇವತಾರಾಧನೆ ಮಾಡುವುದು ಒಳಿತು.

ಮಕರ ರಾಶಿ

ದಾಖಲೆಗಳು ಹಾಗೂ ಹಣಕಾಸಿನ ಎಲ್ಲಾ ವಿಷಯಗಳಿಗೂ ಭದ್ರತೆಯನ್ನು ನೀಡಿ ಎಲ್ಲೆಂದರಲ್ಲಿ ಇಟ್ಟು ಮರೆಯುವುದು ನಿಮ್ಮ ಸ್ವಭಾವವಾಗಿದೆ ಇದರಿಂದ ಕುಟುಂಬದಲ್ಲಿ ಅಥವಾ ನಿಮಗೆ ವೈಯಕ್ತಿಕವಾಗಿ ಸಮಸ್ಯೆಗಳು ತರಬಹುದು. ಯೋಗ, ಧ್ಯಾನದಿಂದ ಮನಸ್ಸನ್ನು ಹತೋಟಿಗೆ ತರುವುದು ಒಳಿತು. ಇಂದು ಕೆಲವು ವಿಷಯಗಳಲ್ಲಿ ಮನಸ್ಸು ಹೆಚ್ಚು ಕೇಂದ್ರೀಕರಿಸುತ್ತದೆ ಅದು ಒಳ್ಳೆಯ ವಿಷಯ ಇದ್ದರೆ ತೊಂದರೆ ಇಲ್ಲ, ಆದರೆ ಕೆಟ್ಟ ಆಲೋಚನೆ ಇದ್ದರೆ ಆದಷ್ಟು ನಿಮ್ಮ ಮನಸ್ಸನ್ನು ನಿಯಂತ್ರಿಸಿ.

ಕುಂಭ ರಾಶಿ

ಸ್ನೇಹದ ರೂಪದಲ್ಲಿ ಬಂದು ನಿಮಗೆ ಸಮಸ್ಯೆಯನ್ನು ತಂದುಕೊಡಬಹುದು ಆದಷ್ಟು ನಿಜ ಸ್ನೇಹವನ್ನು ಮಾತ್ರ ಬೆಂಬಲಿಸಿ. ಉದ್ಯೋಗ ನಿಮಿತ್ತ ಪರಸ್ಥಳ ವಾಸವೂ ನಿಮ್ಮ ಮನಸ್ಸನ್ನು ಕಾಡಬಹುದು. ಆರ್ಥಿಕ ವಿಷಯದಲ್ಲಿ ಹೆಚ್ಚಿನ ನಿರೀಕ್ಷೆ

ಇದೆ. ನಿಮ್ಮಿಂದ ಲೇವಾದೇವಿ ವ್ಯವಹಾರವನ್ನು ಇಂದು ಆದಷ್ಟು ಮಾಡದಿರುವುದು ಒಳಿತು.

ಮೀನ ರಾಶಿ

ಹಲವು ದಿನಗಳಿಂದ ಮದುವೆಗಾಗಿ ಕಾಯುತ್ತಿರುವವರಿಗೆ ಇಂದು ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ. ಆರ್ಥಿಕ ಯೋಜನೆಗಳಲ್ಲಿ ಹಿನ್ನಡೆ ಕಾಣಬಹುದು ಆದರೆ ಮುಂದಿನ ದಿನಗಳಲ್ಲಿ ನೀವು ಮಾಡುತ್ತಿರುವ ಕೆಲಸದ ಶ್ರಮವೂ ಖಂಡಿತವಾಗಿಯೂ ಲಾಭ ಕಾರಿಯಾಗಿ ಬರುವುದು ನಿಶ್ಚಿತ. ಬಂದು ವರ್ಗದಲ್ಲಿ ನಿಮ್ಮ ವಿರುದ್ದವಾಗಿ ಅಪ ಪ್ರಚಾರ ಮಾಡುವಂತಹ ಜನರಿದ್ದಾರೆ ಇಂತಹ ಹಿತಶತ್ರುಗಳಿಂದ ಆದಷ್ಟು ದೂರವಿರಿ.

ನೀವು ಸಂಪರ್ಕಿಸಿ…

ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. 903637905

Leave a Reply

Your email address will not be published. Required fields are marked *