ಪರೀಕ್ಷೆ ಧೈರ್ಯವಾಗಿ ಎದುರಿಸಿ : ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್

ಮಕ್ಕಳು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ 2ದಿನಗಳ ಕಾಲ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಧೈರ್ಯವಾಗಿ ಎದುರಿಸಬೇಕು ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹೇಳಿದರು

ಜೀವದಾರಾ ಪದವೀಧರರ ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಲಕ್ಷ್ಮಿಪುರಂನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾಸ್ಕ್ ಸ್ಯಾನಿಟೈಸರ್ ಗುಲಾಬಿ ಪೆನ್ನು ವಿತರಿಸಿ ಮಾತನಾಡಿದ ಅವರು ಸರ್ಕಾರ ಪರೀಕ್ಷೆಯನ್ನು 2ದಿನಕ್ಕೆ ಸೀಮಿತ ಮಾಡಿ ಮಕ್ಕಳಿಗೆ ಯಾವುದೇ ಗೊಂದಲ ಇಲ್ಲದಂತೆ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ
ಕೋವಿಡ್ ನಿಂದ ಈ ಬಾರಿ ಶಾಲೆಗಳೇ ನಡೆದಿಲ್ಲ .ಆನ್ ಲೈನ್ ಮೂಲಕವೇ ಅತಿಹೆಚ್ಚು ತರಗತಿಗಳನ್ನು ನಡೆದಿದ್ದು ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳನ್ನು ಉತ್ತೀರ್ಣ ಮಾಡುವುದಾಗಿ ಸರ್ಕಾರ ತಿಳಿಸುವುದರಿಂದ ಯಾವ ವಿದ್ಯಾರ್ಥಿ ಕೂಡ ಧೈರ್ಯಗೆಡದೆ ಪರೀಕ್ಷೆ ಬರೆಯಬೇಕು ಎಂದು ಹೇಳಿದರು .
ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್ ,ಖಜಾಂಜಿ ಜಯಸಿಂಹ ,ಸಹ ಕಾರ್ಯದರ್ಶಿ ರಂಗನಾಥ್ ,ಕೇಬಲ್ ಮಹೇಶ್ ,ವಿನಯ್ ಕಣಗಾಲ್ ,ಹಾಗೂ ಶಿಕ್ಷಕರುಗಳು ಹಾಜರಿದ್ದರು

Leave a Reply

Your email address will not be published. Required fields are marked *