ಇತ್ತೀಚಿಗೆ ಜ್ಯೋತಿಷ್ಯ ಮತ್ತು ಆಗಮದ ಇಬ್ಬರು ಇವೆರಡು ವಿದ್ಯೆಯನ್ನು ಶೇ.೫೦ ರಷ್ಟು ಮಾತ್ರ ತಿಳಿದುಕೊಂಡು ಕಲುಷಿತಗೊಳಿಸುತ್ತಿದ್ದಾರೆ. ಇಂತಹ ಕಾರ್ಯಾಗಾರಗಳನ್ನು ಹೆಚ್ಚು ಆಯೋಜಿಸಿ ಜ್ಯೋತಿಷ್ಯ ಶಾಸದ ಪ್ರಚಾರ ಮಾಡಬೇಕು. ಹಿರಿಯರು, ಪೂಜ್ಯರು ಮತ್ತು ಋಷಿಮುನಿಗಳು ಕಾಪಾಡಿಕೊಂಡಿರುವ ಶಾಸವನ್ನು ಉಳಿಸಬೇಕು ಎಂದು ಕುವೆಂಪುನಗರ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ಶ್ರೀ ಮಾಯಕಾರ ಗುರುಕುಲ ಆಯೋಜಿಸಿದ್ದ ಕೆ.ಪಿ.ನಕ್ಷತ್ರ ಜ್ಯೋತಿಷ್ಯ ಪುಸ್ತಕ ಬಿಡುಗಡೆ ಹಾಗೂ 100ನೇ ಜ್ಯೋತಿಷ್ಯ ಕಾರ್ಯಾಗಾರದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಪಂಚಾಂಗ ಕರ್ತ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಹೇಳಿದರು

ಸಮಸ್ಯೆ ಕಂಡು ಹಿಡಿದು ಪರಿಹಾರ ಸೂಚಿಸುವುದೇ ಜ್ಯೋತಿಷ್ಯ. ಮೂಲದಲ್ಲಿ ಜ್ಯೋತಿಷ್ಯವೆಂಬುದು ಸಮಸ್ಯೆ ಹುಡುಕುವುದು ಮಾತ್ರ. ಪರಿಹಾರ ಸೂಚಿಸುವುದು ಆಗಮದ ಕೆಲಸ. ಭೌತಶಾಸ, ಖಗೋಳಶಾಸ ಮತ್ತು ಗಣಿತ ಜ್ಯೋತಿಷ್ಯದ ಪ್ರಮುಖ ಅಂಗ. ಹೀಗಾಗಿಯೇ ಜ್ಯೋತಿಷ್ಯವನ್ನು ಕೇಂದ್ರ ಸರಕಾರ ಜ್ಯೋತಿರ್ವಿಜ್ಞಾನ ಎಂದು ಕರೆದಿದ ಎಂದು ತಿಳಿಸಿದರು.
ಜ್ಯೋತಿಷ್ಯ ಶಾಸಕ್ಕೆ ಗಣಿತ ಸಹಕಾರಿಯಾಗಿದೆ. ಗಣಿತ ಸೂತ್ರದ ಮೂಲಕ ಜ್ಯೋತಿಷ್ಯ ಹೇಳುವ ಪ್ರಯೋಗವನ್ನು ಆರಂಭಿಸಿದ್ದೇನೆ. ಜ್ಯೋತಿಷ್ಯ ನಿರೀಕ್ಷಿಸುವವರಿಂದಲೇ ಅಂಕಿ ಹೇಳಿಸಿ, ಅದನ್ನು ಗಣಿತ ಸೂತ್ರದಲ್ಲಿ ಲೆಕ್ಕ ಮಾಡಿ ಜ್ಯೋತಿಷ್ಯ ಹೇಳಬಹುದು ಎಂದರು.

ಆಯುರ್ವೇದ ಪಂಡಿತರು ಚರಕ, ಶೂಶ್ರತರ ಶೋಕ್ಲವನ್ನ ಸರಿಯಾಗಿ ತಿಳಿಯದೇ ಇಂಗ್ಲಿಷ್ನ ಸಾರಾಂಶದ ಮೇಲೆ ಚಿಕಿತ್ಸೆ ನೀಡುತ್ತಿದ್ದಾರೆ. ಯೋಗದಲ್ಲೂ ಅದೇ ಸಮಸ್ಯೆ ಇನ್ನೂ ಜ್ಯೋತಿಷ್ಯದಲ್ಲಿಯೂ ಆರ್ಯಭಟ, ವರಾಹಮೀರ ಹೇಳಿರುವುದನ್ನು ಯಾರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಮೂಲ ಅಧ್ಯಯನಕ್ಕೆ ಅಡ್ಡಿಯಾಗಿರುವ ಭಾಷೆ ಸಮಸ್ಯೆ ನಿವಾರಿಸಿಕೊಳ್ಳಬೇಕಿದೆ ಎಂದರು.
ಬೆಂಗಳೂರಿನ ಕಾಸ್ಮಿಕ್ ಮಿಷನ್ ಸ್ಥಾಪಕ ಡಾ.ಅರುಳಾಳನ್ ಪುಸ್ತಕ ಕುರಿತು ಮಾತನಾಡಿ, ಜ್ಯೋತಿಷ್ಯದಲ್ಲಿ ಕಠಿಣ ಎನಿಸುವ ಪ್ರಕರಣಗಳಿಗೆ ಕೆಪಿ(ಕೃಷ್ಣಮೂರ್ತಿ) ಜ್ಯೋತಿಷ್ಯದಲ್ಲಿ ಪರಿಹಾರಗಳಿವೆ. ಇಂಗ್ಲಿಷ್ ಮತ್ತು ತಮಿಳಿನಲ್ಲಿರುವ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವುದು ಶ್ಲಾಘನೀಯ. ಕೆಪಿ ಕುರಿತ ಮೊದಲ ಮತ್ತು ಏಕೈಕಿ ಕನ್ನಡ ಪುಸ್ತಕ ಇದಾಗಿದೆ ಎಂದರು.
ಇದೇ ವೇಳೆ ಜ್ಯೋತಿಷಿ ಶಂಕರ್ ಬಾಂಡ್ ಅವರಿಗೆ ಜ್ಯೋತಿಷ್ಯಶಾಸ ಜ್ಞಾನನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂಲದಲ್ಲೇ ಅಧ್ಯಯನಿಸಬೇಕು:
ಡಾ.ಚಂದ್ರಶೇಖರ ಬಣಗಾರ್ ಅವರ ಕೆ.ಪಿ.ನಕ್ಷತ್ರ ಜ್ಯೋತಿಷ್ಯ ಮತ್ತು ಮೂಗೂರು ಮಧುದೀಕ್ಷಿತ ಪೆಂಗ್ ಶೂಯಿ ಪುಸ್ತಕವನ್ನು
ಬಿಡುಗಡೆಗೊಳಿಸಿದ ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ಭಾರತದ ಯೋಗ, ಆಯುರ್ವೇದ ಮತ್ತು ಜ್ಯೋತಿಷ್ಯ ವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ ಇವುಗಳನ್ನು ಮೂಲದಲ್ಲಿ ಅಧ್ಯಯನ ಮಾಡುವ ಕೆಲಸ ಆಗಬೇಕಿದೆ.
ಜ್ಯೋತಿಷ್ಯವನ್ನು ಮೂಲದಲ್ಲೇ ತಿಳಿದುಕೋಳ್ಳಬೇಕು
ಡಾ.ಚಂದ್ರಶೇಖರ ಬಣಗಾರ್ ಅವರ ಕೆ.ಪಿ.ನಕ್ಷತ್ರ ಜ್ಯೋತಿಷ್ಯ ಮತ್ತು ಮೂಗೂರು ಮಧುದೀಕ್ಷಿತ ಪೆಂಗ್ ಶೂಯಿ ಪುಸ್ತಕವನ್ನು
ಬಿಡುಗಡೆಗೊಳಿಸಿದ ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ಭಾರತದ ಯೋಗ, ಆಯುರ್ವೇದ ಮತ್ತು ಜ್ಯೋತಿಷ್ಯ ವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಆದರೆ ಇವುಗಳನ್ನು ಮೂಲದಲ್ಲಿ ಅಧ್ಯಯನ ಮಾಡುವ ಕೆಲಸ ಆಗಬೇಕಿದೆ.
ಇದೇ ವೇಳೆ ಜ್ಯೋತಿಷಿ ಶಂಕರ್ ಬಾಂಡ್ ಅವರಿಗೆ ‘ಜ್ಯೋತಿಷ್ಯಶಾಸ ಜ್ಞಾನನಿಧಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೆ.ಪಿ.ನಕ್ಷತ್ರ ಜ್ಯೋತಿಷ್ಯದ ಗ್ರಂಥಕಾರ ಡಾ.ಚಂದ್ರಶೇಖರ ಬಣಗಾರ್, ಪ್ರಕಾಶಕ ರಾಮನಾಥ್ ಗುಪತ, ಮಾಯಕಾರ ಗುರುಕುಲ ಸ್ಥಾಪಕ ಡಾ.ಮೂಗೂರು ದೀಕ್ಷಿತ್ ಇನ್ನಿತರರು ಇದ್ದರು.