ಮೃದಂಗ ಕಲಾವಿದ ಎ.ವಿ.ಆನಂದ್ ಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರಧಾನ

ಮೈಸೂರು: ಸರಳ, ಸಂಪ್ರದಾಯಿಕ ದಸರೆ ಸಾಂಸ್ಕೃತಿಕ ವೈಭವಕ್ಕೆ ಗಣ್ಯರಿಂದ ಗುರುವಾರ
ಮೃದಂಗ ಕಲಾವಿದ ಎ.ವಿ.ಆನಂದ್ ಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರಧಾನ ಚಾಲನೆ ದೊರೆಯಿತು.
ಅರಮನೆ ಮುಂದಿನ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೊದಲಾದವರಿಂದ ಮೃದಂಗ ವಾದ್ಯ ಕಲಾವಿದ ಎ.ವಿ.ಆನಂದ್ ಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಷ್ಟ್ರಪತಿಗಳು ಸಹ ನಮ್ಮ ಸಂತೋಷದಲ್ಲಿ ಭಾಗವಹಿಸಿದ್ದಾರೆ. ಒಂದು ಸರ್ಕಾರವೇ ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಸಂಭ್ರಮದಿಂದ ನಾಡಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾಲಂಕಾರವನ್ನು ಉದ್ಘಾಟಿಸಿ ದಸರಾ ವೈಭವ ಹೆಚ್ಚಿಸಿರುವ ಕೀರ್ತೀಗೆ ಸುನೀಲ್ ಅವರು ಭಾಗಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ದಸರಾ ವೈಭವ ಹೆಚ್ಚಾಗಿಸುವ ದಿಸೆಯಲ್ಲಿ ಮಾಡಿದ್ದಾರೆ. ಜಿಲ್ಲಾ ಸಚಿವರು ಮೈಸೂರಿನವರೇ ಆಗಿ ಕೆಲಸ ಮಾಡುತ್ಯಿದ್ದಾರೆ. ಮೈಸೂರು ನಾಗರೀಕರ ಪೌರತ್ವ ಯಾವಾಗ ಕೊಡುತ್ತೀರಾ ಎಂದು ತಮಾಷೆಗೆ ಕೇಳಿದೆ, ಅಷ್ಟರಮಟ್ಟಿಗೆ ಮೈಸೂರು ಅಭಿವೃದ್ಧಿ ಗೆ ಶ್ರಮಿಸುತ್ತಿದ್ದಾರೆ. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ವಾಗಿ ರಾಷ್ಟ್ರಕ್ಕೆ ಮೈಸೂರು ಮಾದರಿಯಾಗಿದೆ. ಮುಮ್ಮಡಿ ಕೃಷ್ಣರಾಜ ರಿಂದ ಪ್ರಾರಂಭವಾದ ವೈಭವ ಈಗಲೂ ಅದರ ಪರಂಪರೆ ಮುಂದುವರೆಸಿದೆ. ನಾಲ್ವಡಿಯವರು ಮೈಸೂರು ಮಹಾರಾಜರಾಗಿ ಮೈಸೂರಿಗೆ ಕೊಟ್ಟ ಆಡಳಿತ ನಾವೆಲ್ಲರೂ ಸ್ಮರಿಸಬೇಕಿದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಯಲ್ಲಿಯೂ ಮಾಡಿದ ಅಭಿವೃದ್ಧಿ ಕೆಲಸ ಶ್ಲಾಘನೀಯ. ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಶಕ್ತಿ ತುಂಬಿದರು. ೧೨ ನೇ ಶತಮಾನದಲ್ಲಿ ಬಸವಣ್ಣನವರು ಅಡಿಗಲ್ಲು ಹಾಕಿದರೆ, ಮೈಸೂರು ರಾಜರು ಅದಕ್ಕೆ ಶಕ್ತಿ ತುಂಬಿದ್ದಾರೆ. ಮೊದಲ ಬಾರಿಗೆ ವಿಧಾನಪರಿಷತ್ತಿನ ಕಲ್ಪನೆಯನ್ನು ಮಾದರಿಯಾಗಿ ಹಾಗೂ ಪ್ರೇರಣೆಯಾಗಿ ಕೊಟ್ಟ ನಾಡು ಮೈಸೂರು ಮಾದರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಮೈಸೂರು ಕೊಡುಗೆಯನ್ನು ಸ್ಮರಿಸಿಕೊಳ್ಳಬೇಕಿದೆ. ಇಲ್ಲಿ ಸುಸಂಸ್ಕೃತಿಯನ್ನು ಕಾಣುತ್ತಿದ್ದೇವೆ ಎಂದರೆ ಇಲ್ಲಿನ ಹಿರಿಯರು ಹಾಕಿಕೊಟ್ಟ ಬೇರಾಗಿದೆ. ಕೊರೊನಾದಂತಹ ಕಷ್ಟದ ನಡುವೆಯೂ ಬದುಕು ರೂಪಿಸಿಕೊಳ್ಳಬೇಕೆಂಬ ದೈರ್ಯ ನಮ್ಮ ಹಿರಿಯರು ಹಾಕಿಕೊಟ್ಟಿರುವುದನ್ನು ನಾವು ಸ್ಮರಿಸಬೇಕಿದೆ ಎಂದರು.

ಸ್ವಾವಲಂಬಿ ಜೀವನದ ವಿಶ್ವಾಸ ಬೆಳೆಸಿಕೊಂಡವರಿಗೆ ನಿಜಕ್ಕೂ ದೇವರು ಕೃಪೆ ಸಿಗಲಿದೆ. ಮತ್ತೊಬ್ಬರ ಮೇಲೆ ದಾಳಿ ಮಾಡುವ ಸಂಸ್ಕೃತಿ ನಮ್ಮದಲ್ಲ. ವಸುದೈವ ಕುಟುಂಬಕ್ಕಂ, ಸರ್ವೇಜನ ಸುಖಿನೋಭವತಂ ಎಂಬ ದಿಸೆಯಲ್ಲಿ ನಾವು ಬೆಳೆದವರಾಗಿದ್ದಾವೆ. ನಮ್ಮ ಮೇಲೆ ನಡೆಯುವ ತಡೆಯುವ ನಿಟ್ಟಿನಲ್ಲಿ ದಸರಾ ದುಷ್ಟ ಶಿಕ್ಷೆಯ ಪ್ರತೀಕವಾಗಿ ದಸರೆ ನಡೆಯುತ್ತಿದೆ ಎಂದರು.
ಸರ್ಕಾರದ ಪ್ರಯತ್ನದ ಜತೆಗೆ ಜನರ ಸುಸಂಸ್ಕೃತ ಜವಾಬ್ದಾರಿ ಯೂ ಬೇಕಾಗುತ್ತದೆ. ಶಕ್ತಿ ದೇವತೆಯ ಆರಾಧನೆಯ ಜತೆಗೆ ನಮ್ಮನ್ನು ನಾವು ಅಭಿವೃದ್ಧಿ ಪಡಿಸಿಕೊಳ್ಳುವ ಚಿಂತನೆ ಬೆಳೆಸಿಕೊಳ್ಳಬೇಕಿದೆ. ಮೈಸೂರಿನ ಬಗ್ಗೆ ಅಭಿಮಾನ ಪಡುವ ಜತೆಗೆ ಜ್ಞಾನದ ನಾಡಾಗಿ ಮೈಸೂರು ಬೆಳಕು ಚೆಲ್ಲಿದೆ. ಇಲ್ಲಿ ಜ್ಞಾನದ ಬೆಳಕು ನೀಡಿದ್ದು, ಅಂತಹ ಜ್ಞಾನದ ಸಂಪಾದನೆಗೆ ಮುಂದಾಗಬೇಕಿದೆ. ಇಂದಿನ ಶಿಕ್ಷಣದಿಂದ ಕೆಲಸ ಸಿಗಬಹುದು. ಆದರೆ, ಸಂಸ್ಕೃತಿ, ಜ್ಞಾನ ಸಿಗುವುದು ಕಷ್ಟವಿದೆ ಎಂದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಂಸ್ಕಾರ ಹಾಗೂ ಸಂಸ್ಕೃತಿ ಗೆ ಮೈಸೂರು ಹೆಸರಾಗಿದ್ದು, ಇವೆರಡು ಎಂದಿಂದೆಗೂ ಮೈಸೂರಿನ ಈ ಹೆಮ್ಮೆ ಮರೆಯಾಗುವುದಿಲ್ಲ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಸಹ ದಸರಾ ವೀಕ್ಷಣೆ ಮಾಡುತ್ತಿರುವುದು ಮೈಸೂರು ಪರಂಪರೆಗೆ ಸಿಕ್ಕಿರುವ ಗೌರವವಾಗಿದೆ. ಇಂತಹ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಧಾನಪರಿಷತ್ತ್ ನಿರ್ಮಿಸಿದ ಮೈಸೂರು ಮಹಾರಾಜ ಕಾರ್ಯಕ್ರಮ ದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ತಂದಿದೆ. ಮಾನಸಿಕ ನೆಮ್ಮದಿ ಇಂತಹ ಕಾರ್ಯಕ್ರಮ ದಿಂದ ಮಾತ್ರವೇ ಸಿಗುತ್ತದೆ. ರಾಷ್ಟ್ರಕ್ಕೆ ಶ್ರೇಷ್ಠವಾದ ಕಾರ್ಯಕ್ರಮ ಎಂದರೆ ಅದು ಮೈಸೂರು ದಸರಾ ಕಾರ್ಯಕ್ರಮ ವಾಗಿದೆ. ಬಸವಣ್ಣನವರ ಅನುಭವ ಮಂಟಪದಿಂದ ಪ್ರಜಾಪ್ರಭುತ್ವದ ಪರಿಕಲ್ಪನೆ ದೊರೆತಿದೆ. ಹೀಗಾಗಿ ನೂತನ ಲೋಕಸಭಾ ಕಚೇರಿಯ ಯಾವುದಾದರೂ ಒಂದಕ್ಕೆ ಅನುಭವ ಮಂಟಪ ಎಂಬ ಹೆಸರು ನಾಮಕರಣ ಮಾಡಲಿ ಎಂದು ಹೇಳಿದರು.
ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮಹಾಪೌರ ಸುನಂದ ಪಾಲನೇತ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಕೌಟಿಲ್ಯ ರಘು,
ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಕೃಷ್ಣಪ್ಪಗೌಡ, ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎನ್.ವಿ.ಪಣೀಶ್, ಜಂಗಲ್ ಲಾಡ್ಜ್ ಮತ್ತು ವಿಹಾರಧಾಮಗಳ ಅಧ್ಯಕ್ಷ
ಎಂ.ಅಪ್ಪಣ್ಣ, ಉಪ ಮಹಾಪೌರ ಅನ್ವರ್ ಬೇಗ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಜಿಪಂ ಸಿಇಒ ಯೋಗೀಶ್ ಇನ್ನಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಮೃದಂಗ ಕಲಾವಿದ ಎ.ವಿ.ಆನಂದ್ ಮಾತನಾಡಿ, ನಾನು ಬೆಂಗಳೂರಿನವನಾಗಿದ್ದರೂ ಮೈಸೂರು ಕಂಡರೆ ನನಗೆ ಹೆಚ್ಚು ಹೆಮ್ಮೆ, ಪ್ರೀತಿಯಾಗಿದೆ. ಜಯಚಾಮರಾಜೇಂದ್ರ ಒಡೆಯರ್ ಅವರನ್ನು ನೋಡಿ ಮಾತನಾಡಿ, ನಮ್ಮ ಸಂಗೀತ ಕಚೇರಿಯನ್ನು ನೋಡಿ ಬೆಂಬಲಿಸಿದ್ದರು. ಅವರು ದೊಡ್ಡ ವಿದ್ವಾಂಸರಾಗಿದ್ದರು. ಹಿಂದೂಸ್ಥಾನಿ, ಪಾಶ್ಚಾತ್ಯ ಸಂಗೀತವನ್ನು ಅಧ್ಯಯನ ಮಾಡಿದ್ದರು. ಅಪಾರ ಪ್ರಬುದ್ದತೆ ಹೊಂದಿರುವ ಪರಂಪರೆಯನ್ನು ಮೈಸೂರು ಹೊಂದಿದೆ. ಸಂಗೀತ ರತ್ನ ಟಿ.ಚೌಡಯ್ಯ ಅವರೊಟ್ಟಿಗೆ ನನ್ನ ಹನ್ನೊಂದನೆ ವಯಸ್ಸಿನಲ್ಲೇ ಅವರೊಟ್ಟಿಗೆ ಕಚೇರಿಯಲ್ಲಿ ಭಾಗವಹಿಸಿದ್ದೇ, ಪ್ರಪಂಚದಲ್ಲಿ ಪ್ರಖ್ಯಾತಿ ಪಡೆದಿದ್ದ ಅವರೊಟ್ಟಿಗೆ ಕಚೇರಿ ನಡೆಸಿದ್ದು ನನ್ನ ಪುಣ್ಯವಾಗಿದೆ. ವಾಸುದೇವಚಾರಿ ಮೊದಲಾದವರಿಗೆ ಆಸ್ತಾನದಲ್ಲಿ ಪ್ರೋತ್ಸಾಹಿಸಿದವರಾಗಿದ್ದಾರೆ ಎಂದರು.
ಬೆಂಗಳೂರಿನ ಪ್ರಭಾತ್ ಕಲಾವಿದರ ತಂಡ ನಡೆಸಿಕೊಟ್ಟ ‘ ಕರುನಾಡ ವೈಭವ’ ನೃತ್ಯ ರೂಪಕ ಜನಮನ ಗೆದ್ದರೆ, ಬಳಿಕ ನಡೆದ ಸಂಗೀತ ಕಾರ್ಯಕ್ರಮ ಮೊದಲ ದಿನವೇ ಜನರ ಮನಸ್ಸು ಗೆಲ್ಲುವಲ್ಲಿಯೂ ಯಶಸ್ವಿ ಯಾಯಿತು. ಇದರೊಟ್ಟಿಗೆ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿನ ಚಾಲನೆ ಹಾಗೂ ಅರಮನೆ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ಫೇಸ್ ಬುಕ್, ಯೂಟ್ಯೂಬ್ ಗಳಲ್ಲಿ ವೀಕ್ಷಿಸಿದ್ದು ವಿಶೇಷವಾಗಿತ್ತು.