*ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ಬುದವಾರದಂದು ಬೆಳಿಗ್ಗೆ:10.30 ಕ್ಕೆ ಮಹಾರಾಣಿ ವಾಣಿಜ್ಯ & ನಿರ್ವಹಣಾ ಮಹಿಳಾ ಕಾಲೇಜು, ಪಡುವಾರಹಳ್ಳಿ, ಮೈಸೂರು ಇಲ್ಲಿ ಸರ್ಕಾರದ ಆದೇಶದಂತೆ ಕಾಲೇಜು ವಿಧ್ಯಾರ್ಥಿ / ವಿಧ್ಯಾರ್ಥಿನಿಯರಿಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರಪಾಲಿಕೆ
ನಾಮನಿರ್ದೇಶಿತ ಸದಸ್ಯರಾದ ಶ್ರೀ ಚಿಕ್ಕವೆಂಕಟು ರವರೊಂದಿಗೆ ಚಾಲನೆ ನೀಡಿದರು, ಚಾಲನೆ ನೀಡಿ ಮಾತನಾಡಿದ ಶಾಸಕರು ಪ್ರತಿಯೊಬ್ಬ ವಿಧ್ಯಾರ್ಥಿನಿಯು ತಪ್ಪದೇ ಲಸಿಕೆ ಹಾಕಿಸಿಕೊಂಡು ತಮ್ಮ ಪೋಷಕರು ಹಾಗೂ ಕುಟುಂಬದ ಸದಸ್ಯರಿಗೂ ಲಸಿಕೆ ಪಡೆಯುವಂತೆ ಉತ್ತೇಜಿಸಬೇಕೆಂದು ಮನವಿ ಮಾಡಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು.

ಈ ಸಮಯದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಚನ್ನಪ್ಪಗೌಡರವರು, ತಾಲ್ಲೂಕು ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಡಾ:ಮಹದೇವಪ್ರಸಾದ್, ಆರ್.ಸಿ.ಹೆಚ್.ಡಾ:ರವಿ, ಡಾ:ಶಿವಕುಮಾರ್, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ:ಮಹದೇವಸ್ವಾಮಿ, ಕಲಾ ಕಾಲೇಜು ಪ್ರಾಂಶುಪಾಲರಾದ ಡಾ:ವಿಜಯ್, ಮುಂತಾದವರು ಹಾಜರಿದ್ದರು.