ಮೈಸೂರು: ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಶ್ರೀ ಸುತ್ತೂರು ಶಾಖಾಮಠದ ಆವರಣಕ್ಕೆ ಬಂದ ಅಪರೂಪ ಅತಿಥಿ ಎಲ್ಲರ ಗಮನಸೆಳೆಯಿತು.
ಒಪಿಯೋಡ್ರೈಸ್ ಜಾತಿಗೆ ಸೇರಿದ ನಾಲ್ಕು ಅಡಿ ಉದ್ದದ ಹಸಿರು ಹಾವು ಶಾಖಾ ಮಠಕ್ಕೆ ಬಂದಿದ್ದ ಅಪರೂಪದ ಅತಿಥಿಯಾಗಿದೆ. ಇದನ್ನು ಜೆಎಸ್ಎಸ್ ಆಸ್ಪತ್ರೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಆರ್.ಎಂ. ಚಂದ್ರಶೇಖರ್ ಸೆರೆಹಿಡಿದಿದ್ದಾರೆ. ಬಳಿಕ ಚಾಮುಂಡಿ ಬೆಟ್ಟದ ತಪ್ಪಲಿನ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.