ಆಫ್ಘಾನಿಸ್ತಾನ:- ದೇಶ ತೊರೆಯಲು ಹಾತೊರೆಯುತ್ತಿದ್ದ ಆಫ್ಘಾನಿಸ್ತಾನದ ಮಂದಿ ವಿಮಾನ ಹತ್ತುವ ವೇಳೆ ನೂಕುನುಗ್ಗಲುತಾಲಿಬಾನ್ ಕೈಸೇರಿದ ಆಫ್ಘಾನಿಸ್ತಾನ ವಿಮಾನ ಹತ್ತಲು ಹೋಗಿ ಪ್ರಾಣ ಕಳೆದುಕೊಂಡ ಜನ ಏರ್ಪೋರ್ಟ್ನಲ್ಲಿ ಜನಜಂಗುಳಿ ನಿಯಂತ್ರಣಕ್ಕೆ ಗುಂಡಿನ ಸುರಿಮಳೆಗೈದ ತಾಲಿಬಾನಿಗಳು ಘಟನೆಯಲ್ಲಿ ಐವರ ದುರ್ಮರಣ

ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಘಟನೆ
ದೇಶ ತೊರೆಯಲು ಹಾತೊರೆಯುತ್ತ ವಿಮಾನ ಹತ್ತಲು ಯತ್ನಿಸುವ ವೇಳೆ ಐವರು ವಿಮಾನ ಟೇಕ್ ಆಗುತ್ತಿದ್ದಂತೆ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ನೂಕು ನುಗ್ಗಲು ಉಂಟಾಗಿದೆ. ದೇಶ ತೊರೆಯಲು ಒಂದೇ ಬಾರಿ ಸಾವಿರಾರು ಜನರು ವಿಮಾನ ನಿಲ್ದಾಣಕ್ಕ ಬಂದ ವೇಳೆ ಜನ ಜಂಗುಳಿ ನಿಯಂತ್ರಿಸಲು ತಾಲಿಬಾನ್ ಗಳು ಗುಂಡಿನ ಸುರಿಮಳೆ ಸುರಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ.

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಟೈಯರ್ ಹಿಡಿದು ಜನರು ಪ್ರಾಣ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಐವರು ಜಾರಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ತಾಲಿಬಾನ್ ಭಯೋತ್ಪಾದಕರು ಅಪ್ಘಾನಿಸ್ತಾನದ ಸಂಸತ್ ಭವನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ಯಾರೂ ಕೂಡ ಭಯ ಪಡುವ ಆಗತ್ಯವಿಲ್ಲ. ಮಹಿಳೆಯರು ನಿರ್ಭೀತಿಯಿಂದ ಎಲ್ಲೆಂದರೆ ಇಲ್ಲಿ ಓಡಾಡಬಹುದು. ಮೊದಲಿನಂತೆ ಯಾವುದೇ ಕಟ್ಟುಪಾಡುಗಳಿಲ್ಲ ಎಂದು ತಾಲಿಬಾನ್ ವಕ್ತಾರರು ಧೈರ್ಯ ತುಂಬಿದರೂ ಜನರು ಮಾತ್ರ ಆತಂಕಕ್ಕೀಡಾಗಿದ್ದಾರೆ.

ಇನ್ನು ಕೆಲವರು ವಿಮಾನ ಹತ್ತಿದರೆ, ಮತ್ತೆ ಕೆಲವು ದ್ವಿಚಕ್ರ ವಾಹನ ಮತ್ತು ಕಾರು ಹತ್ತಿದ್ದಾರೆ, ಇನ್ನು ಕೆಲವರು ನಡಿಗೆಯಲ್ಲಿ ಅಕ್ಕ ಪಕ್ಕದ ದೇಶದಲ್ಲಿಹೋಗಿ ಸೇಫ್ ಆಗಲು ಪ್ರಯಾಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.