ಮೈಸೂರು; ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮೊದಲ ಟೀಂ ಗಜಪಡೆಗಳು ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜಿ ಸರವೇರಿಸಿ ಅರಮನೆಗೆ ಬೀಳ್ಕೊಡಲಾಯಿತು . 8.13 ರಂದು ಆನೆಗಳನ್ನು ವೀರನಹೊಸಹಳ್ಳಿಯಿಂದ ಆಗಮಿಸಿ ಅರಣ್ಯ ಭವನದಲ್ಲಿ ಇದ್ದವು

ಅರಣ್ಯ ಭವನದಿಂದ ಕಾಲ್ನಡಿಗೆಯಲ್ಲಿ ಹೊರಟ ದಸರಾ ಆನೆಗಳು ಮೈಸೂರಿನ ಮುಖ್ಯ ರಸ್ತೆಗಳ ಮೂಲಕ ಮೈಸೂರಿನ ಅರಮನೆಗೆ ಆಗಮಿಸಿತು
ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಅಭಿಮನ್ಯು ಅಂಡ್ ಟೀಂನ ಎಲ್ಲಾ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಮಾಡಲಾಯಿತು. ಗಜ ಪಡೆಗೆ ಪ್ರಧಾನ ಅರ್ಚಕ ಡಾ , ಶಶಿಶೇಖರ್ ದೀ ಕ್ಷೀತ್ ನೇತೃತ್ವದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು , ಅರಮನೆಯ ಅವರಣದ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 8.36 ರಿಂದ 9.11 ರ ಶುಭ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆಸಲ್ಲಿಸಿ , ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು , ಅಂಬಾರಿ ಹೊರಲಿರುವ ಅಭಿಮನ್ನು ನೇತೃತ್ವದಲ್ಲಿ ಎಂಟು ಆನೆಗಳನ್ನು ಅರಮನೆ ಪ್ರವೇಶ ಮಾಡಿದವು , ಮಂಗಳ ವಾದ್ಯ , ಪೂರ್ಣ ಕುಂಭ ಸ್ವಾಗತದ ಮೂಲಕ ಆನೆಗಳನ್ನು ಬರಮಾಡಿಕೊಳ್ಳಲಾಯಿತು, ಮಂಗಳ ವಾದ್ಯ , ಪೂರ್ಣಕುಂಭ ಸ್ವಾಗತದ ಮೂಲಕ ಅರಮನೆ ಅಡಳಿತ ಮಂಡಳಿ ಬರಮಾಡಿಕೊಂಡಿತು ,

ಎಲ್ಲಾ ಅನೆಗಳಿಗೆ ಕಬ್ಬು , ಬೆಲ್ಲ , ತೆಂಗಿನ ಕಾಯಿ ಕೊಟ್ಟು , ಪೂಜೆ ಸಲ್ಲಿಸಿ ಆನೆಗಳಿಗೆ ಸ್ವಾಗತ ಕೋರಲಾಯಿತು , ಶಾಸಕರಾದ ಎಸ್ , ಎ , ರಾಮದಾಸ್ , ಎಲ್ , ನಾಗೇಂದ್ರ , ಮೇಯರ್ ಸುನಂದ ಪಾಲನೇತ್ರಾ ನಿಗಮ ಮಂಡಳಿಗಳ ಅಧ್ಯಕ್ಷರಾದ ಹೆಚ್.ವಿ.ರಾಜೀವ್ , ಎಂ . ಶಿವಣ್ಣ , ಎನ್.ವಿ.ಫಣೀಶ್ , ಎಲ್.ಆರ್.ಮಹದೇವಸ್ವಾಮಿ , ಎಂ.ಆರ್.ಕೃಷ್ಣಪ್ಪಗೌಡ , ಉಪಮೇಯರ್ ಅನ್ವರ್ ಬೇಗ್ , ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ , ಜಿಲ್ಲಾಧಿಕಾರಿ ಡಾ . ಬಗಾದಿ ಗೌತಮ್ , ಪೊಲೀಸ್ ಆಯುಕ್ತ ಡಾ . ಚಂದ್ರಗುಪ್ತ , ಎಸ್ಪಿ ಆರ್.ಚೇತನ್ , ಜಿಪಂ ಸಿಇಒ ಎ.ಎಂ.ಯೋಗೀಶ್ , ಪಾಲಿಕೆ ಆಯುಕ್ತ ಜಿ . ಲಕ್ಷ್ಮೀಕಾಂತ್ ರೆಡ್ಡಿ , ಡಿಸಿಎಫ್ ಕರಿಕಾಳನ್ , ಎಡಿಸಿ ಡಾ . ಮಂಜುನಾಥಸ್ವಾಮಿ , ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ , ಸೇರಿದಂತೆ ನಾನಾ ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು .