ದಿ.ಮೈಕ್ ಚಂದ್ರು ನೆನಪು ಮತ್ತು ಸಂಗೀತ ರಸಸಂಜೆ,ಸನ್ಮಾನ

ಕಾರ್ಯಕ್ರಮ.ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ಮೈಸೂರು ಇವರ ಆಶ್ರಯದಲ್ಲಿ ಮೈಸೂರಿನ ಜೆಪಿನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದ ಕನಕದಾಸರ ರಂಗ ಮಂಟಪದಲ್ಲಿ ಮೈಸೂರು ಧ್ವನಿ ಮೈಕ್ ಚಂದ್ರು ರವರ ನೆನಪಿನ ಕಾರ್ಯಕ್ರಮದಡಿ ವಿವಿಧ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ ಹಲವರಿಗೆ ಸನ್ಮಾನ ಹಾಗೂ ಮೈಕ್ ಚಂದ್ರು ರವರು ಪ್ರತೀ ವರ್ಷವೂ ನಡೆಸುಕೊಂಡು ಬರುತ್ತಿದ್ದ ಹಳೆ ಕನ್ನಡ ಹಾಗೂ ಹಿಂದಿ ಚಿತ್ರಗೀತೆಗಳ ರಸಸಂಜೆ ಕಾರ್ಯಕ್ರಮವನ್ನು ಓಂಕಾರ್ ಸೌಂಡ್ಸ್ ಅಂಡ್ ಸಿಸ್ಟಮ್ (ಆನಂದ್)ರವರ ತಂಡದೊಂದಿಗೆ ನಡೆಸಲಾಯಿತು.ಮೈಸೂರಿನ ಮಹಾಪೌರರಾದ ಶ್ರೀಮತಿ ಸುನಂದ ಪಾಲನೇತ್ರ ರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಈ ವೇಳೆ ಗಣೇಶ್ ಪ್ರಸಾದ್,ಎಸ್ ಎಂ ಪಿ ಶಿವಕುಮಾರ್,ರಾಜೇಶ್ವರಿ ಮಲ್ಲಿಕಾರ್ಜುನಪ್ಪ,ಶ್ರೀ ವಿಶ್ವರೂಪ,ಇಳೆಯರ್ ಸ್ವಾಮೀಜಿ,ಶೋಭಾ ಸುನೀಲ್,ಹೆಚ್ ಶೇಖರ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸುನೀಲ್,ಜೋಗಿ ಮಹೇಶ್,ಕೇಬಲ್ ಶೇಖರ್ ,ವಕೀಲರಾದ ಶಶಿಕಿರಣ್,ರವಿ,ರಂಜನ್, ಜಗನ್ನಾಥ್

ಭೋವಿ,ಮಹೇಂದ್ರ, ನವೀನ್ ಕೆಂಪಿ,ಪುನೀತ್,ಗುಣಶೇಖರ್ ಇನ್ನಿತರರು ಹಾಜರಿದ್ದರು.ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ ಶ್ರೀ ಸಿ ಬಿ ಉತ್ತಯ್ಯ,ಶ್ರೀಮತಿ ಶೈಲಜಾ ಮಹದೇವಸ್ವಾಮಿ,ನಾಗವಲ್ಲಿ ಶ್ರೀನಿವಾಸ್,ಶ್ರೀ ಮಾದಪ್ಪ,ಶ್ರೀ ಶಶಿಕುಮಾರ್,ರೇವಣ್ಣ ಆರಾಧ್ಯ,ಶಶಿಧರ ಕೆ ಎಂ,ಶ್ರೀ ಬಸವಣ್ಣ,ಕೆ ಎ ಸಿದ್ದಲಿಂಗಪ್ಪ,ಡಾ.ಪ್ರಹ್ಲಾದ್ ರಾವ್ ಸಿ ಜೆ,ಶ್ರೀಮತಿ ಅಂಶು ಅಗರ್ ವಾಲ್,ಶಾರದ ಶಿವಲಿಂಗಸ್ವಾಮಿ,ಕುಮಾರ್,ಪುಟ್ಟರಾಜಪ್ಪ ಎಸ್,ಶ್ರೀ ಮಂಜುನಾಥ್,ಡಾ.ಸುಶೀಲನಾಗರಾಜ್ ರವರಿಗೆ ಅಭಿನಂದಿಸಲಾಯಿತು.