6-8-2021ರ ಇಂದಿನ ದಿನದ ರಾಶಿಭವಿಷ್ಯ

6-8-2021ರ ಇಂದಿನ ದಿನದ ರಾಶಿಭವಿಷ್ಯವನ್ನು ಶಿರಸಿ ಮಾರಿಕಾಂಭ ದೇವಿಯನ್ನು ಸ್ಮರಿಸುತ್ತ ನೊಡೋಣ ಬನ್ನಿ

ಮೇಷ ರಾಶಿ

ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದೆ. ಅಗತ್ಯ ಆರ್ಥಿಕ ಅಭಿವೃದ್ಧಿ ಕಾಣಬಹುದು. ಉದ್ಯಮ ವಲಯದಲ್ಲಿ ಬೆಳವಣಿಗೆ ಆಗಲಿದೆ. ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳು ಸರಾಗವಾಗಿ ನಡೆಯುವುದು. ಶೈಕ್ಷಣಿಕ ವಿಷಯ ಪ್ರಗತಿಯಲ್ಲಿದೆ.

ವೃಷಭ ರಾಶಿ

ನಿಮ್ಮ ಪ್ರತಿಯೊಂದು ನಡೆಯು ಪ್ರಶಂಸೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸುವಿರಿ. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ಪ್ರಾಪ್ತಿಯಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಕೆಲಸದ ಒತ್ತಡ ಹಾಗೂ ಓಡಾಟಗಳಿಂದ ಆರೋಗ್ಯದಲ್ಲಿ ಬದಲಾವಣೆಯಾಗಬಹುದು, ಆದಷ್ಟು ಎಚ್ಚರಿಕೆ ಇರಲಿ.

ಮಿಥುನ ರಾಶಿ

ಕೌತುಕ ವಿಷಯಗಳಲ್ಲಿ ಆಸಕ್ತಿದಾಯಕ ಇರಲಿದೆ. ನವೀನ ತಂತ್ರಜ್ಞಾನಗಳನ್ನು ಕೆಲಸದಲ್ಲಿ ಬಳಸಿಕೊಳ್ಳಬಹುದು. ಕೆಲಸದಲ್ಲಿ ನವೀನ ಆಲೋಚನೆ ಹಾಗೂ ವಿಷಯದ ಕಲಿಕೆ ಕಾಣಬಹುದು. ಅಧಿಕಾರಿ ವರ್ಗದವರು ನಿಮಗೆ ಬೆಂಬಲ ನೀಡಲಿದ್ದಾರೆ. ಆರ್ಥಿಕವಾಗಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಕಂಡುಬರುತ್ತದೆ.

ಕರ್ಕಾಟಕ ರಾಶಿ

ಆರ್ಥಿಕ ವಿಷಯಗಳಲ್ಲಿ ಕಷ್ಟಪಡಬೇಕಾಗಿದೆ. ಹಣಕಾಸಿನ ಸಹಾಯಕ್ಕಾಗಿ ಮಾತುಕತೆ ನಡೆಸುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಉತ್ತಮ ಅವಕಾಶಗಳು ಕೂಡಿದ್ದು ಲಾಭಾಂಶ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗಳು ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ಹಳೆಯ ವೈಷಮ್ಯಗಳನ್ನು ಮರೆತು ಪ್ರೀತಿಯ ಭಾವನೆಯಲ್ಲಿ ಇರುವಿರಿ.

ಸಿಂಹ ರಾಶಿ

ಮನಸ್ಸಿನಲ್ಲಿ ಚಿಂತೆ ಆವರಿಸುವುದು. ಕಿರಿಕಿರಿಯೆನಿಸುವ ಪ್ರಸಂಗಗಳಿಂದ ನಿಮ್ಮಲ್ಲಿ ಖಿನ್ನತೆ ಮೂಡಬಹುದು. ಕೆಲಸದ ವಿಚಾರ ಮುಂದಕ್ಕೆ ಹೋಗಲಿದೆ. ನಿಮ್ಮಲ್ಲಿ ಮೂಡುವ ಕೋಪವನ್ನು ಆದಷ್ಟು ಶಾಂತ ಪಡಿಸಿ. ಮಕ್ಕಳ ವಿಷಯದಲ್ಲಿ ಬೇಸರ ಬರಬಹುದು. ಕೆಲಸದಲ್ಲಿ ಜಂಜಾಟ ಹೆಚ್ಚಾಗಲಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಂಜೆಯ ವೇಳೆಗೆ ಶುಭಸುದ್ದಿ ಹಾಗೂ ಆರ್ಥಿಕ ಪರಿಸ್ಥಿತಿ ಸರಿಹೋಗಲಿದೆ.

ಕನ್ಯಾ ರಾಶಿ

ನಂಬಿಕೆಯಿಂದ ಮೋಸ ಹೋಗುವ ಸಂದರ್ಭ ಬರಬಹುದು. ಹೆಚ್ಚಿನ ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ಯೋಜನೆಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಹಾಗೂ ಅವಕಾಶಗಳನ್ನು ಬಿಡದೆ ಪಡೆಯಿರಿ. ದೈಹಿಕ ವ್ಯಾಯಾಮಕ್ಕೆ ಆಧ್ಯತೆ ನೀಡುವುದು ಒಳಿತು. ಹಿಂದಿನ ವಿಚಾರಗಳಲ್ಲಿ ಕಾಲ ಕಳೆಯುವುದು ಬೇಡ. ಭವಿಷ್ಯದ ಬಗ್ಗೆ ಉತ್ತಮ ದೃಷ್ಟಿ ಇರಲಿ.

ತುಲಾ ರಾಶಿ

ಆಕಸ್ಮಿಕವಾಗಿ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ಮೋಜು ಮಸ್ತಿಗಳಲ್ಲಿ ಅಧಿಕ ಕಾಲ ಕಳೆಯುವುದು ಬೇಡ. ನಿಮ್ಮಲ್ಲಿ ಮೂಡುವ ಆಲೋಚನೆಗಳನ್ನು ಬದಲಾವಣೆಗೆ ಆಗಲಿದೆ. ಹುದ್ದೆಗಳಲ್ಲಿ ವೈಮನಸ್ಸು ಸೃಷ್ಟಿಯಾಗಲಿದೆ. ಜಂಟಿ ವ್ಯವಹಾರಗಳು ಅನುಮಾನಸ್ಪದವಾಗಿ ಕಾಣಬಹುದು. ಹಿರಿಯರ ವಿಚಾರಗಳನ್ನು ಕಾರ್ಯಗತಕ್ಕೆ ತನ್ನಿ. ತಪ್ಪಾಗದಂತೆ ಕೆಲಸ ನಿರ್ವಹಿಸಿ.

ವೃಶ್ಚಿಕ ರಾಶಿ

ಬೇರೆಯವರ ಯೋಜನೆಯಲ್ಲಿ ನೀವು ಮಧ್ಯಂತರವಾಗಿ ಪಾಲ್ಗೊಳ್ಳುವುದು ಬೇಡ. ಕೆಲವರು ಸುಖಾಸುಮ್ಮನೆ ನಿಮ್ಮನ್ನು ಪ್ರೇರೇಪಿಸಿ ಕದನ ಕಲಹಕ್ಕೆ ಬಿಡಬಹುದು ಎಚ್ಚರವಿರಲಿ. ಮಾತುಕೊಟ್ಟು ನಡೆಸದೆ ಕೂರಬೇಡಿ ಇದು ನಿಮಗೆ ಅವಮಾನ ವಾಗಬಹುದು. ಮಾನಸಿಕವಾಗಿ ಸದೃಢರಾಗಿ. ಕುಟುಂಬದೊಡನೆ ಇರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ಆಗಬೇಕಿದೆ. ನಿಮ್ಮಲ್ಲಿ ಮೂಡವ ಭಯವನ್ನು ತೆಗೆದುಹಾಕಿ.

ಧನುಸ್ಸು ರಾಶಿ

ಲೆಕ್ಕಪತ್ರಗಳು ನಿಖರವಾಗಿ ಇರಲಿ. ದಾಖಲೆಗಳನ್ನು ಜಾಗ್ರತೆಯಾಗಿ ಕಾಪಾಡಿಕೊಳ್ಳಿ. ನಿಮ್ಮ ಮರೆವಿನಿಂದ ವಸ್ತುಗಳು ಕಳೆದುಹೋಗುವುದು ಎಚ್ಚರವಿರಲಿ. ಶಿಕ್ಷಣದಲ್ಲಿ ಆದಷ್ಟು ಆಸಕ್ತಿ ಅವಶ್ಯಕವಿದೆ. ಕೆಟ್ಟ ಅಭ್ಯಾಸಗಳನ್ನು ಬಿಡುವುದಕ್ಕೆ ಪ್ರಯತ್ನಮಾಡಿ. ದಾಂಪತ್ಯದಲ್ಲಿ ಸಹಮತ ಹಾಗೂ ಪ್ರೇಮ ಹೆಚ್ಚಾಗಲಿದೆ.

ಮಕರ ರಾಶಿ

ಸೋಲುಗಳನ್ನು ಮರೆತು ಗೆಲುವಿನ ತಂತ್ರವನ್ನು ಮಾಡುವುದು ಸೂಕ್ತ. ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಳ್ಳಿ. ಯೋಜನೆಗಳಿಗೆ ಬೇಕಾಗಿರುವ ಬಂಡವಾಳಕ್ಕೆ ಕಾರ್ಯಪ್ರವೃತ್ತರಾಗಿ. ಮಕ್ಕಳ ಇಷ್ಟವನ್ನು ಕಡೆಗಣಿಸಬೇಡಿ. ಕೌಟುಂಬಿಕ ಮನಸ್ತಾಪವನ್ನು ತೆಗೆದುಹಾಕಿ. ದೈವ ಕಾರ್ಯಗಳಿಗೆ ನೀವು ಯೋಚನೆ ಮಾಡುವಿರಿ.

ಕುಂಭ ರಾಶಿ

ಬರುವ ಸಮಸ್ಯೆಗಳನ್ನು ಆದಷ್ಟು ವಿವೇಚನೆಯಿಂದ ಪರಿಹರಿಸಿ. ವಾದ-ವಿವಾದಗಳಲ್ಲಿ ಕಾಲಹರಣ ಮಾಡುವುದು ಬೇಡ. ಕುಟುಂಬಸ್ಥರ ಬೇಡಿಕೆಗಳಿಗೆ ಸ್ಪಂದನೆ ನೀಡುವುದು ಉತ್ತಮ. ಸಾಲಭಾದೆಯಿಂದ ವಿಮುಕ್ತರಾಗಲು ಹೆಚ್ಚಿನ ಶ್ರಮ ಅಗತ್ಯವಿದೆ. ಆರೋಗ್ಯದ ಬಗ್ಗೆ ಗಮನವಹಿಸಿ.

ಮೀನ ರಾಶಿ

ಹೊಸ ಆವಿಷ್ಕಾರಗಳಿಗೆ ಮುಂದಾಗುವಿರಿ. ಮಾನಸಿಕ ಸ್ಥೈರ್ಯದಿಂದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಚಂಚಲ ಸ್ವಭಾವವನ್ನು ತೆಗೆದುಹಾಕುವುದು ಉತ್ತಮ. ಗುರು ಹಿರಿಯರ ಮಾರ್ಗದರ್ಶನವನ್ನು ಅನುಸರಿಸಿ. ಪ್ರೇಮ ವಿಚಾರದಲ್ಲಿ ಸಫಲತೆ ಸಾಧಿಸುತ್ತೀರಿ. ಇಂದಿನ ಕೆಲಸ ಇವತ್ತೆ ಮಾಡಲು ಪ್ರಯತ್ನ ಪಡುವುದು ಒಳಿತು. ಮಕ್ಕಳ ಪ್ರಗತಿದಾಯಕ ಬೆಳವಣಿಗೆ ಹರ್ಷ ತರುತ್ತದೆ.

ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ನಿಶ್ಚಿತ.

ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ ಕಲಹ, ಜನವಶ, ಮನವಶ, ಧನವಶ ಇಷ್ಟಾರ್ಥಸಿದ್ಧಿಗಳು ಹೀಗೆ ಹತ್ತು-ಹಲವು ಗುಪ್ತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

9686487402

Leave a Reply

Your email address will not be published. Required fields are marked *