ಮೈಸೂರು: ಕೇಂದ್ರ ಸರ್ಕಾರ ಗುಜರಾತ್ ಗೆ ಪರಿಹಾರ ಹಣ ಬಿಡುಗಡೆ ಮಾಡಿದ ರೀತಿ ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ.ಇದು ಮಲತಾಯಿ ಧೋರಣೆ ತೋರಿಸುತ್ತದೆ. ಇವತ್ತು ಅಧಿಕಾರ ಶಾಶ್ವತ ಅಲ್ಲ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ ಅನ್ನೋದು ಮುಖ್ಯ.
ಇವತ್ತು ಬಹುತೇಕ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಇಲ್ಲ, ಕೆಲವರು ಬೆಂಗಳೂರು, ದೆಹಲಿಯಲ್ಲಿ ಇದ್ದಾರೆ ಇವರು ಅಧಿಕಾರಕ್ಕಾಗಿ ಸರ್ಕಸ್ ಮಾಡ್ತಿದ್ದಾರೆ.ವಾಮ ಮಾರ್ಗದ ಮೂಲಕ ಕ್ಲಿಯರ್ ಮೆಜಾರಿಟಿಗೆ ಬಂದ ಬಿಜೆಪಿ ಅವ್ರು ಜನ್ರ ಕಷ್ಟ ಕೇಳುವಲ್ಲಿ ಬದ್ಧತೆ ತೋರುತ್ತಿಲ್ಲ.

ಕೋವಿಡ್ ಮೂರನೇ ಅಲೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ.ಮಿಸ್ಟರ್ ನರೇಂದ್ರ ಮೋದಿ ಕೊರೊನಾ ವಿರುದ್ಧ ಯುದ್ಧ ಮಾಡೋಣ ಎಂದು ಕರೆನೀಡಿದ್ರಿ.ಕಳೆದ ಒಂದು ಒಂದೂವರೆ ವರ್ಷದಲ್ಲಿ ನೀವು ಮಾಡಿದ ಯುದ್ದ ಯಾರ ಮೇಲೆ ಕೋವಿಡ್ ಪರಿಹಾರ ಎನಾದ್ರೂ ಕಂಡಿಕೊಂಡಿದ್ದೀರಿ.
ನೀವು ಮಾಧ್ಯಮ ,ಚುನಾವಣಾ ಆಯೋಗ ವಿರೋಧ ಪಕ್ಷದ ನಾಯಕರು, ಜನಸಾಮಾನ್ಯರ ಸ್ವಾತಂತ್ರ್ಯ ಹರಣ ಮಾಡೋಕೆ ಕಾಲ ಹರಣ ಮಾಡುತ್ತಿದ್ದಿದ್ದಾರೆ. ಪ್ರವಾಹದಿಂದ ಇಂದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ ರಾಜ್ಯದಲ್ಲಿ ಸರ್ಕಾರ ಜೀವಂತ ಇದ್ದಹಾಗೆ ಕಾಣುತ್ತಿಲ್ಲ.ಉತ್ತರ ಕನ್ನಡ ನೆರೆ ಹಾವಳಿಗೆ ಒಮ್ಮೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ರು ಅಷ್ಟೇ ಗುಜರಾತ್ ನಲ್ಲಿ ಪ್ರವಾಹ ಆದಾಗ ಪ್ರಧಾನಿ ಗಳು ವೈಮಾನಿಕ ಸಮೀಕ್ಷೆ ಮಾಡ್ತಾರೆ.ಒಂದು ಸಾವಿರ ಕೋಟಿ ಪರಿಹಾರ ಘೋಷಣೆ ಮಾಡುತ್ತಾರೆ.ಆದ್ರೆ ರಾಜ್ಯಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ.
ಯತ್ನಾಳ್, ಹೆಚ್.ವಿಶ್ವನಾಥ್ ಮೌನಿ ಬಾಬಗಳಾಗಿದ್ದಾರೆ. ನರೇಂದ್ರ ಮೋದಿ ಆಧುನಿಕ ದುರ್ಯೋಧನ ಇದ್ದ ಹಾಗೆ ಅಂತಾ ನಾನು ಹೇಳಿದ್ದೆ.ದುರಹಂಕಾರದ ಪರಮಾವಧಿ ಬಿಡದೆ ಇದ್ರೆ ಜನ ನಿಮಗೆ ಬುದ್ದಿ ಕಲಿಸುತ್ತಾರೆ ಹೈ ಕಮಾಂಡ್ ಸಂಸ್ಕೃತಿ ಅಂತಾ ಮುದುಳಿಸುತ್ತಿದ್ದರು ರಾಜ್ಯದ ಯಾವುದೇ ಮುಖ್ಯಮಂತ್ರಿ ಮಂತ್ರಿ ಹೈ ಕಮಾಂಡ್ ಗೆ ಲೀಸ್ಟ್ ಕೊಟ್ಟು ಅಪ್ರೂವಲ್ ತೆಗೆದುಕೊಳ್ಳುತ್ತಿರಲಿಲ್ಲ ಮೋದಿ, ನಡ್ಡ, ಅಮೀತ್ ಶಾ ಯಾರನ್ನ ಕ್ಲಿಯರ್ ಮಾಡ್ತಾರೆ ಅವ್ರು ಮಂತ್ರಿಗಳು ಅಗ್ತಾರೆ ಅಂತಾರೇ ಬೊಮ್ಮಾಯಿ.

ಬಿಜೆಪಿಗೆ ಸಂವಿಧಾನದಲ್ಲಿ ವಿಶ್ವಾಸ ಇಲ್ಲ
ಮುಖ್ಯಮಂತ್ರಿಗೆ ಅಧಿಕಾರ ಚಲಾಯಿಸಿ ಮಂತ್ರಿಮಂಡಲ ರಚನೆ ಮಾಡಿಕೊಳ್ಳುವ ಅವಕಾಶ ಇದೆ.ಆದ್ರೆ ಇವ್ರು ಹೈಕಮಾಂಡ್ ನಿಂದ ಲಕೋಟೆಯಲ್ಲಿ ಬರೋ ಹೆಸ್ರನ್ನ ಪೈನಲ್ ಮಾಡ್ತೀವಿ ಅಂತಾರೇ.ಇದು ನಾಡಿನ ಜನ್ರಿಗೆ ಮಾಡ್ತಿರೋ ಅವಮಾನ.
ಕಾಂಗ್ರೆಸ್ ಲಕೋಟೆ ಸಂಸ್ಕ್ರತಿ ಅಂತಾ ಹೆಳ್ತಿದ್ದರು.ಈಗ ಬಿಜೆಪಿ ನಾಯಕರು ಯಾವ ಸಂಸ್ಕ್ರತಿ ಅನುಸರಿಸುತ್ತಿದ್ದಾರೆ ಪಲ್ಯೂಷನ್ ಕಂಟ್ರೋಲ್ ಬೋರ್ಡ್ ಅಧ್ಯಕ್ಷರಾಗಿದ್ದ ಸುಧೀಂದ್ರ ರಾವ್ ಅವ್ರೆ ಹೇಳಿದ್ದಾರೆ. ಸಿಎಂ ಬೀಗ ಮರಿ ಸ್ವಾಮಿಗೆ ೯.೫ ಕೋಟಿ ನೀಡಿರೋದನ್ನ ದಾಖಲೆ ಸಮೇತ ಅವರೇ ಹೇಳಿಕೊಂಡಿದ್ದಾರೆ.
ಸಿಪಿಸಿ 154 ಪ್ರಕಾರ ಈ ದೇಶದಲ್ಲಿ ಸಿಬಿಐ ಆಗ್ಲಿ, ಇಡಿ ಆಗ್ಲೀ, ರಾಜ್ಯದ ಪೊಲೀಸ್ ಎನಾದ್ರೂ ಜೀವಂತವಾಗಿ ಇದ್ದಿದ್ರೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಬಹುದಿತ್ತು.ಬಿಡಿಎ ನಲ್ಲಿ ಚಂದ್ರಕಾಂತ ರಾಮಲಿಂಗಂ ೨೫ ಕೋಟಿಗಳನ್ನ ಆರ್ ಟಿ ಜಿ ಎಸ್ ಮೂಲಕ ಯಡಿಯೂರಪ್ಪ ಕುಟುಂಬ ಪಡೆದಿದ್ದಾರೆ ಅನ್ನೋ ಆರೋಪ ಕೂಡ ಇದೆ.ಯತ್ನಾಳ್, ವಿಶ್ವನಾಥ್ ಇಬ್ಬರೂ ಸಿಎಂ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ರು.ಆದ್ರೆ ಮುಖ್ಯಮಂತ್ರಿ ಬದಲಾವಣೆ ಆದ್ಮೇಲೆ ಉತ್ತರನ ಪೌರುಷ ಎಂಬಂತಾಗಿದೆ ಇಬ್ಬರ ನಡೆ.

ಈ ಬಗ್ಗೆ ತನಿಖೆ ಮೂಲಕ ತಾರ್ಕಿಕ ಅಂತ್ಯ ಕಾಣುವ ವರೆಗೂ ತೆಗೆದುಕೊಂಡು ಯೋಗ ಬೇಕಿತ್ತು.ಮಿಸ್ಟರ್ ಮೋದಿ ನಾವು ಕಾವೂಂಗ, ನಾನ್ ಕಾನೆದೂಂಗ ಅಂತಾ ಹೇಳ್ತಾ ಇದ್ರು.ಆದ್ರೆ ಇಲ್ಲಿ ಆಗ್ತಿರೋದು ಏನೂ.
ಬಸವರಾಜ ಬೊಮ್ಮಾಯಿ ಹೆಸರಿಗೆ ಮುಖ್ಯಮಂತ್ರಿ.ವೈಯುಕ್ತಿಕವಾಗಿ ಬೊಮ್ಮಾಯಿಗೆ ಸ್ವಾತಂತ್ರ್ಯ ಇದ್ದಿದ್ರೆ ಇಷ್ಟೋತ್ತಿಗೆ ಮಂತ್ರಿಮಂಡಲ ರಚನೆ ಆಗ್ತಾ ಇತ್ತು. ಅಧಿಕಾರ ನಡೆಸೋದು, ಬಿಜೆಪಿ ಪಾರ್ಟಿ ಅರ್ ಆರ್.ಎಸ್.ಎಸ್.ಹೋರಾಟಗಾರ ಯಾವತ್ತು ಕಣ್ಣೀರು ಹಾಕೋದಿಲ್ಲ.ಶರಣಾಗಿರೋದಕ್ಕೆ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.ಯಡಿಯೂರಪ್ಪ ಕಣ್ಣೀರಲ್ಲಿ ಎಲ್ಲಾ ಉತ್ತರ ಇದೆ.
ಸುದ್ದಿಗೋಷ್ಟಿಯಲ್ಲಿ ವಿ.ಎಸ್. ಉಗ್ರಪ್ಪ ಹೇಳಿಕೆ.